<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಜನತೆಗೆ ಪ್ರೀತಿ ಬೇಕಿದೆ. ಆದರೆ ದೊರಕಿದ್ದೇನು? ಬಿಜೆಪಿಯ ಬುಲ್ಡೋಜರ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಜನರಲ್ಲಿ ಭೀತಿ ಸೃಷ್ಟಿಸಿದೆ ಎಂಬ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಹಂಚಿದ್ದಾರೆ.</p>.<p>ಆಡಳಿತದ ಕ್ರಮವನ್ನು ಕಾಂಗ್ರೆಸ್ ಜತೆಗೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷ ತೀವ್ರ ಕಳವಳ ವ್ಯಕ್ತಪಡಿಸಿದೆ.</p>.<p>ಇದನ್ನೂ ಓದಿ: <a href="https://www.prajavani.net/india-news/tmc-mp-abhishek-attacks-centre-bsf-over-killing-of-youth-bjp-hits-back-1014619.html" itemprop="url">ವ್ಯಕ್ತಿ ಹತ್ಯೆ: ಬಿಎಸ್ಎಫ್, ಅಮಿತ್ ಶಾ ಜನರ ಕ್ಷಮೆ ಕೋರಬೇಕು –ಅಭಿಷೇಕ್ </a></p>.<p>ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿದೆ. ಆದರೆ ಅವರಿಗೆ ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್! ಹಲವು ದಶಕಗಳಿಂದ ಜನರು ಶ್ರಮದಿಂದ ಬೆಳೆಸಿದ ನಾಡನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಜನರನ್ನು ವಿಭಜಿಸುವ ಮೂಲಕ ಅಲ್ಲ, ಜನರನ್ನು ಒಗ್ಗೂಡಿಸುವ ಮೂಲಕ ಕಾಶ್ಮೀರವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.</p>.<p>ಇದನ್ನೂ ಓದಿ... <a href="https://www.prajavani.net/karnataka-news/karnataka-assembly-election-2023-dakshina-kannada-siddaramaiah-amit-shah-congress-bjp-politics-1014651.html" target="_blank">ದ. ಕ.ದವರು ಬ್ಯಾಂಕ್ ಕಟ್ಟಿದರು, ಗುಜರಾತಿಗಳು ನುಂಗಿ ನೀರು ಕುಡಿದರು: ಸಿದ್ದು ಟೀಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಜನತೆಗೆ ಪ್ರೀತಿ ಬೇಕಿದೆ. ಆದರೆ ದೊರಕಿದ್ದೇನು? ಬಿಜೆಪಿಯ ಬುಲ್ಡೋಜರ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಜನರಲ್ಲಿ ಭೀತಿ ಸೃಷ್ಟಿಸಿದೆ ಎಂಬ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಹಂಚಿದ್ದಾರೆ.</p>.<p>ಆಡಳಿತದ ಕ್ರಮವನ್ನು ಕಾಂಗ್ರೆಸ್ ಜತೆಗೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷ ತೀವ್ರ ಕಳವಳ ವ್ಯಕ್ತಪಡಿಸಿದೆ.</p>.<p>ಇದನ್ನೂ ಓದಿ: <a href="https://www.prajavani.net/india-news/tmc-mp-abhishek-attacks-centre-bsf-over-killing-of-youth-bjp-hits-back-1014619.html" itemprop="url">ವ್ಯಕ್ತಿ ಹತ್ಯೆ: ಬಿಎಸ್ಎಫ್, ಅಮಿತ್ ಶಾ ಜನರ ಕ್ಷಮೆ ಕೋರಬೇಕು –ಅಭಿಷೇಕ್ </a></p>.<p>ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿದೆ. ಆದರೆ ಅವರಿಗೆ ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್! ಹಲವು ದಶಕಗಳಿಂದ ಜನರು ಶ್ರಮದಿಂದ ಬೆಳೆಸಿದ ನಾಡನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.</p>.<p>ಜನರನ್ನು ವಿಭಜಿಸುವ ಮೂಲಕ ಅಲ್ಲ, ಜನರನ್ನು ಒಗ್ಗೂಡಿಸುವ ಮೂಲಕ ಕಾಶ್ಮೀರವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.</p>.<p>ಇದನ್ನೂ ಓದಿ... <a href="https://www.prajavani.net/karnataka-news/karnataka-assembly-election-2023-dakshina-kannada-siddaramaiah-amit-shah-congress-bjp-politics-1014651.html" target="_blank">ದ. ಕ.ದವರು ಬ್ಯಾಂಕ್ ಕಟ್ಟಿದರು, ಗುಜರಾತಿಗಳು ನುಂಗಿ ನೀರು ಕುಡಿದರು: ಸಿದ್ದು ಟೀಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>