<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪಾರದರ್ಶಕವಾಗಿರುವುದು. 2011ರಲ್ಲಿ ನಡೆದ ಜನಗಣತಿಯ ಅಂಕಿ–ಅಂಶಗಳನ್ನು ಆಧರಿಸಿಯೇ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಕ್ಷೇತ್ರಗಳ ಪುನರ್ವಿಂಗಡಣಾ ಆಯೋಗ ಶುಕ್ರವಾರ ಹೇಳಿದೆ.</p>.<p>‘ಜಮ್ಮು–ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಬಹು ಸಂಕೀರ್ಣವಾದ ಕಾರ್ಯ. ಅದು ಸರಳವಾದ ಗಣಿತಸೂತ್ರಗಳನ್ನು ಆಧರಿಸಿ ಮಾಡುವ ಲೆಕ್ಕಾಚಾರವಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ಚಂದ್ರ ಹೇಳಿದರು.</p>.<p>ಆಯೋಗದ ಮೂವರು ಸದಸ್ಯರ ಸಮಿತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿದ್ದ ನಾಲ್ಕು ದಿನಗಳ ಪ್ರವಾಸ ಪೂರ್ಣಗೊಂಡ ನಂತರ ಅವರು ಈ ಮಾಹಿತಿ ನೀಡಿದರು.</p>.<p>‘ಪುನರ್ವಿಂಗಡಣೆ ಕಾರ್ಯವನ್ನು ಪಾರದರ್ಶಕವಾಗಿಯೇ ನೆರವೇರಿಸಲಾಗುವುದು. ಕರಡನ್ನು ಸಾರ್ವಜನಿಕರ ಮುಂದಿಟ್ಟು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು’ ಎಂದೂ ಹೇಳಿದರು.</p>.<p>‘ಕ್ಷೇತ್ರಗಳ ಪುನರ್ವಿಂಗಡಣೆಗೆ ಜನಸಂಖ್ಯೆಯೇ ಆಧಾರವಾಗಿರುತ್ತದೆ. ಆದರೆ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರಗಳ ಭೌಗೋಳಿಕ ಅಂಶಗಳು, ಸ್ಥಳೀಯ ವೈವಿಧ್ಯಗಳು, ಸಂಪರ್ಕ–ಸಂವಹನದ ಲಭ್ಯತೆಯಂತಹ ಮಾಹಿತಿಯನ್ನು ಪರಿಗಣಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮು–ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪಾರದರ್ಶಕವಾಗಿರುವುದು. 2011ರಲ್ಲಿ ನಡೆದ ಜನಗಣತಿಯ ಅಂಕಿ–ಅಂಶಗಳನ್ನು ಆಧರಿಸಿಯೇ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಕ್ಷೇತ್ರಗಳ ಪುನರ್ವಿಂಗಡಣಾ ಆಯೋಗ ಶುಕ್ರವಾರ ಹೇಳಿದೆ.</p>.<p>‘ಜಮ್ಮು–ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಬಹು ಸಂಕೀರ್ಣವಾದ ಕಾರ್ಯ. ಅದು ಸರಳವಾದ ಗಣಿತಸೂತ್ರಗಳನ್ನು ಆಧರಿಸಿ ಮಾಡುವ ಲೆಕ್ಕಾಚಾರವಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ಚಂದ್ರ ಹೇಳಿದರು.</p>.<p>ಆಯೋಗದ ಮೂವರು ಸದಸ್ಯರ ಸಮಿತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿದ್ದ ನಾಲ್ಕು ದಿನಗಳ ಪ್ರವಾಸ ಪೂರ್ಣಗೊಂಡ ನಂತರ ಅವರು ಈ ಮಾಹಿತಿ ನೀಡಿದರು.</p>.<p>‘ಪುನರ್ವಿಂಗಡಣೆ ಕಾರ್ಯವನ್ನು ಪಾರದರ್ಶಕವಾಗಿಯೇ ನೆರವೇರಿಸಲಾಗುವುದು. ಕರಡನ್ನು ಸಾರ್ವಜನಿಕರ ಮುಂದಿಟ್ಟು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು’ ಎಂದೂ ಹೇಳಿದರು.</p>.<p>‘ಕ್ಷೇತ್ರಗಳ ಪುನರ್ವಿಂಗಡಣೆಗೆ ಜನಸಂಖ್ಯೆಯೇ ಆಧಾರವಾಗಿರುತ್ತದೆ. ಆದರೆ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರಗಳ ಭೌಗೋಳಿಕ ಅಂಶಗಳು, ಸ್ಥಳೀಯ ವೈವಿಧ್ಯಗಳು, ಸಂಪರ್ಕ–ಸಂವಹನದ ಲಭ್ಯತೆಯಂತಹ ಮಾಹಿತಿಯನ್ನು ಪರಿಗಣಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>