ರಾಜಭವನದಲ್ಲಿ ಕಾರ್ಗಿಲ್ ದಿನದ ಅಂಗವಾಗಿ ಮಾತನಾಡಿದ ಕೋಶ್ಯಾರಿ, 'ಭಾರತ ಸ್ವಾಂತಂತ್ರ್ಯ ಹೋರಾಟಕ್ಕೆ ಮತ್ತು ದೇಶಕ್ಕೆ ನೆಹರು ಕೊಡುಗೆ ಅಪಾರ. ಆದರೆ ತಮ್ಮನ್ನು ತಾವು ಶಾಂತಿದೂತ ಎಂದು ನಂಬಲು ಆರಂಭಿಸಿದರು. ಇದರಿಂದ ರಾಷ್ಟ್ರವು ಹಲವು ವರ್ಷಗಳ ವರೆಗೆ ಪರಿಣಾಮವನ್ನು ಎದುರಿಸಬೇಕಾಯಿತು. ನೆಹರು ಅವರ ಶಾಂತಿ ಸಂದೇಶದಿಂದ ಭಾರತಕ್ಕೆ ಪೆಟ್ಟಾಯಿತು' ಎಂದಿದ್ದಾರೆ.