'ಶಾಂತಿದೂತ' ನೆಹರುವಿನಿಂದಾಗಿ ಭಾರತಕ್ಕೆ ಪೆಟ್ಟಾಯಿತು: ಮಹಾರಾಷ್ಟ್ರ ರಾಜ್ಯಪಾಲ

ಮುಂಬೈ: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ತಮ್ಮನ್ನು ತಾವು 'ಶಾಂತಿದೂತ' ಎಂದು ಬಿಂಬಿಸಿಕೊಂಡಿದ್ದರ ಪರಿಣಾಮವನ್ನು ಭಾರತ ಹಲವು ವರ್ಷಗಳ ಕಾಲ ಎದುರಿಸಬೇಕಾಯಿತು ಎಂದು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ವಿವಾದಿತ ಹೇಳಿಕೆ ನೀಡಿದ್ದಾರೆ.
ರಾಜಭವನದಲ್ಲಿ ಕಾರ್ಗಿಲ್ ದಿನದ ಅಂಗವಾಗಿ ಮಾತನಾಡಿದ ಕೋಶ್ಯಾರಿ, 'ಭಾರತ ಸ್ವಾಂತಂತ್ರ್ಯ ಹೋರಾಟಕ್ಕೆ ಮತ್ತು ದೇಶಕ್ಕೆ ನೆಹರು ಕೊಡುಗೆ ಅಪಾರ. ಆದರೆ ತಮ್ಮನ್ನು ತಾವು ಶಾಂತಿದೂತ ಎಂದು ನಂಬಲು ಆರಂಭಿಸಿದರು. ಇದರಿಂದ ರಾಷ್ಟ್ರವು ಹಲವು ವರ್ಷಗಳ ವರೆಗೆ ಪರಿಣಾಮವನ್ನು ಎದುರಿಸಬೇಕಾಯಿತು. ನೆಹರು ಅವರ ಶಾಂತಿ ಸಂದೇಶದಿಂದ ಭಾರತಕ್ಕೆ ಪೆಟ್ಟಾಯಿತು' ಎಂದಿದ್ದಾರೆ.
ಕೋಶ್ಯಾರಿ ಹೇಳಿಕೆಯನ್ನು ಮಹಾರಾಷ್ಟ್ರದ ಸಚಿವ ಮತ್ತು ಕಾಂಗ್ರೆಸ್ನ ಹಿರಿಯ ನಾಯಕ ಅಶೋಕ್ ಚೌಹಾಣ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಂದೇಶ ವಿವಾದ: ವಾಜಪೇಯಿ, ಅಡ್ವಾಣಿ, ಮೋದಿ ದುರ್ಬಲರೇ? ಕಾಂಗ್ರೆಸ್ ಪ್ರಶ್ನೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.