ಮಾಂಝಿ ಅವರು ಗಯಾದ ಇಮಾಂಗಂಜ್ನಲ್ಲಿ ಆರ್ಜೆಡಿ ಅಭ್ಯರ್ಥಿ ಉದಯ್ ನಾರಾಯಣ ಚೌಧರಿ ಅವರ ವಿರುದ್ಧ ಜಯ ಗಳಿಸಿದ್ದಾರೆ.
ಹಿಂದೂಸ್ತಾನ್ ಅವಾಂ ಮೋರ್ಚಾದ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆಯಾಗಿರುವ ಮಾಂಝಿ ಅವರು ಹೊಸ ಸ್ಥಾನದ ಬಗ್ಗೆ ನಿರಾಕರಿಸಲೂ ಇಲ್ಲ ಅಥವಾ ಅದನ್ನು ದೃಢಪಡಿಸಲೂ ಇಲ್ಲ. ಆದರೆ ಯಾವುದೇ ಸಚಿವ ಸ್ಥಾನದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.