''ಪಂಡಿತರು ಕಾಶ್ಮೀರವನ್ನು ತೊರೆದು ಓಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಾಗ ಅಂದಿನ ಸರ್ಕಾರ ಏನು ಮಾಡುತ್ತಿತ್ತು ಎಂಬುದು ವಿಶ್ವಕ್ಕೆ ಗೊತ್ತಿದೆ. ಶಿವಸೇನಾ ಮುಖ್ಯಸ್ಥರು ಪಂಡಿತರಿಗೆ ಮಹಾರಾಷ್ಟ್ರದಲ್ಲಿ ನೆಲೆಸಲು ನೆರವಾದರು. ಇಲ್ಲಿ ನೆಲೆಸಿರುವ ಪಂಡಿತರು ಬಾಳಸಾಹೇಬ್ ಠಾಕ್ರೆ ಅವರನ್ನು ಪೂಜ್ಯವ್ಯಕ್ತಿಯೆಂದು ಗೌರವಿಸುತ್ತಾರೆ'' ಎಂದು ಶಿವಸೇನಾ ಸಂಸದ ಮಾಧ್ಯಮಕ್ಕೆ ತಿಳಿಸಿದರು.