ಕೇರಳದ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಬಂಧಿತ ವ್ಯಕ್ತಿ. ದುಬೈನಿಂದ ಮಂಗಳೂರಿಗೆ ಬಂದ ಈತ ಘನರೂಪದ ಅಂಟಿನೊಂದಿಗೆ ಚಿನ್ನದ ಪುಡಿಯನ್ನು ಬೆರೆಸಿ, ಅದನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ. ಈ ವಸ್ತುವಿನ ಜತೆಗೆ, ಕಚ್ಚಾ ಸರಪಳಿಯ ರೂಪದಲ್ಲಿದ್ದ ಚಿನ್ನವನ್ನೂ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.