ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, ರೈತರನ್ನು ವಾಹನದ ಅಡಿಗೆ ತುಳಿದ ಮೋದಿ ಸರ್ಕಾರ, ಶೇ 50ರಷ್ಟು ಬೆಂಬಲ ಬೆಲೆಯನ್ನು ನೀಡಿಲ್ಲ. 733 ಹುತಾತ್ಮ ರೈತರಿಗೆ ಪರಿಹಾರವನ್ನು ಕೊಟ್ಟಿಲ್ಲ. ರೈತರ ಮೇಲಿನ ಪ್ರಕರಣವನ್ನು ಹಿಂಪಡೆದಿಲ್ಲ. ಕಳೆದ ವರ್ಷ ಈ ಎಲ್ಲ ಭರವಸೆಗಳ ಮೇರೆಗೆ ರೈತರು ಕಿಸಾನ್ ವಿಜಯ ದಿವಸ ಆಚರಿಸಿದ್ದರು ಎಂದು ಹೇಳಿದರು.