ಈ ಸಂಬಂಧ ತಾವು ಮಾತನಾಡಿರುವ 55 ಸೆಕೆಂಡ್ಗಳ ವಿಡಿಯೊವನ್ನು ಮೂಸೆವಾಲಾ ಅವರ ಯುಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ. ಈ ವದಂತಿಗಳ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳಬಾರದು ಎಂದು ಕೈಮುಗಿದು ವಿನಂತಿಸಿದ್ದಾರೆ.
'ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಬೇಸರವಾಗಿದೆ. ಸಾಕಷ್ಟು ವದಂತಿಗಳಿವೆ. ಅವುಗಳನ್ನು ನಂಬಬೇಡಿ. ಇತ್ತೀಚೆಗೆ ಮಗನನ್ನು ಕಳೆದುಕೊಂಡಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಯಾವ ಉದ್ದೇಶವನ್ನೂ ನಾನು ಹೊಂದಿಲ್ಲ' ಎಂದು ಪಂಜಾಬಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಮೂಸೆವಾಲಾ ಹತ್ಯೆಯ ತನಿಖೆಯನ್ನು ಕೇಂದ್ರೀಯ ಸಂಸ್ಥೆಗಳಿಂದ ನಡೆಸಲು ಅಮಿತ್ ಶಾಗೆ ಮನವಿ
'ಜೂನ್ 8ರಂದು ಪ್ರಾರ್ಥನಾ ಸಭೆ ಇದೆ. ಆಗ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಈಗ ಮಾತನಾಡುವ ಸ್ಥಿತಿಯಲ್ಲಿ ನಾನಿಲ್ಲ' ಎಂದೂ ಹೇಳಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಚಂಡೀಗಡದಲ್ಲಿ ಶನಿವಾರ ಮೂಸೆವಾಲಾ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಮೇ 29ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.