ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಜಿಹಾದ್ ವಿರುದ್ಧದ ಕಾನೂನು ಮತ್ತಷ್ಟು ಕಠಿಣ: ಶಿವರಾಜ್ ಸಿಂಗ್ ಚೌಹಾಣ್

Last Updated 5 ಡಿಸೆಂಬರ್ 2022, 7:51 IST
ಅಕ್ಷರ ಗಾತ್ರ

ಇಂದೋರ್(ಮಧ್ಯಪ್ರದೇಶ): ಅಗತ್ಯ ಬಿದ್ದರೆಲವ್ ಜಿಹಾದ್ ವಿರುದ್ಧದ ಕಾನೂನನ್ನು ಮತ್ತಷ್ಟುಕಠಿಣಗೊಳಿಸಿ ಜಾರಿಗೆ ತರಲಾಗುವುದು ಎಂದುಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ನ್ನು ಉಲ್ಲೇಖಿಸಿ ಮಾತನಾಡಿದ ಅವರು,ಬಲವಂತವಾಗಿ, ಪ್ರಭಾವ ಬಳಸಿ, ಆಮಿಷವೊಡ್ಡಿ, ಹಣಕಾಸು ಸಹಾಯ ಅಥವಾ ಮದುವೆಯ ಭರವಸೆ ಸೇರಿದಂತೆ ಇತರೆ ಮೋಸದ ತಂತ್ರಗಳನ್ನು ಬಳಸಿ ಧಾರ್ಮಿಕವಾಗಿ ಮತಾಂತರ ನಡೆಸುವುದನ್ನು ನಿಷೇಧಿಸಲಾಗಿದೆ. ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ತಾಂತ್ಯ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಮಹಿಳೆಯರ ಭೂಮಿ ಕಸಿಯುವ ಉದ್ಧೇಶದಿಂದ ಮದುವೆಯಾಗುತ್ತಿರುವವರ ಪ್ರಕರಣಗಳಲ್ಲಿ ಲವ್ ಜಿಹಾದ್ ವಾಸನೆ ಕಂಡುಬಂದಿದೆ. ಮದುವೆಯ ಬಳಿಕ ಮತಾಂತರ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಗ್ರಾಮಸಭೆ, ಪಂಚಾಯ್ತಿಗಳಿಗೆಲವ್‌ ಜಿಹಾದ್‌ ಕಾಯ್ದೆಯು ಅಧಿಕಾರ ನೀಡುವುದರಿಂದಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾದ ಎಲ್ಲಾ ಚಟುವಟಿಕೆಗಳು ನಿಲ್ಲುತ್ತವೆ ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT