ಭಾರತದ ಜೊತೆಗೆ ಸೇರಲು ಹರಿಸಿಂಗ್ ಬಯಸಿದ್ದರು ಎಂಬುದು ಜೂನ್ 1947ರಲ್ಲಿಯೇ ನೆಹರೂ ಅವರಿಗೆ ಗೊತ್ತಿತ್ತು. ಅಂದಿನ ವೈಸರಾಯ್ ಮೌಂಟ್ಬ್ಯಾಟನ್ ಅವರಿಗೆ ಬರೆದಿದ್ದ ಸಂದೇಶದಲ್ಲಿಯೂ ಇದನ್ನು ಉಲ್ಲೇಖಿಸಿದ್ದರು ಎಂದು ಹೇಳಿದ್ದಾರೆ. ಇತಿಹಾಸವನ್ನು ತಪ್ಪಾಗಿ ನಿರೂಪಿಸುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಲು, ಜಮ್ಮು ಮತ್ತು ಕಾಶ್ಮೀರ ಜನರ ಜೊತೆಗೆ ದೇಶದ ಜನರು ನಿಲ್ಲಲು ಇದು ಸಕಾಲ ಎಂದಿದ್ದಾರೆ.