<p class="title"><strong>ಮುರಾದಾಬಾದ್:</strong> ಉತ್ತರಪ್ರದೇಶದ ಮುರಾದಾಬಾದ್ನಲ್ಲಿ 2010ರಲ್ಲಿ ನಡೆದಿದ್ದ ಇಬ್ಬರು ದಲಿತ ಸಹೋದರಿಯರ ಸಜೀವ ದಹನ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 7 ಮಂದಿಗೆ ಪರಿಶಿಷ್ಟಜಾತಿ–ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.</p>.<p class="title">ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಆನಂದ್ ಪಾಲ್ ಸಿಂಗ್ ಅವರು ಮಂಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಏಳು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಮೂರ್ತಿ ಸಂಧ್ಯಾ ಚೌಧರಿ ಅವರು 26 ಪುಟಗಳ ಆದೇಶ ನೀಡಿದ್ದಾರೆ.</p>.<p class="title">ಆರೋಪಿಗಳಾದ ಸತೀಶ್ ಮದನ್, ಸಾಗರ್ ಭಂಡುಲಾ, ಬಂಟಿ ಮಲಿಕ್, ಆಶಾ ಸಚ್ದೇವ, ಅಮರ್ಜೀತ್ ಕೌರ್, ವಿನೋದ್ ಕಾಜಕಾಡ್ ಮತ್ತು ಸಾನಿಯಾ ಕೊಹ್ಲಿ ಅವರನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಲಯವು ಅವರಿಗೆ ತಲಾ ₹ 1ಲಕ್ಷ ದಂಡ ವಿಧಿಸಿದೆ.</p>.<p class="title"><strong>ಘಟನೆಯ ವಿವರಣೆ: </strong>ಸ್ವಚ್ಛತಾ ಕಾರ್ಮಿಕ ಮಹಿಳೆ ರಾಜೋ ಅವರ ಮಗ ರಾಕೇಶ್ ಮೇಲೆ 2010ರ ಡಿ. 9ರಂದು ನಡೆದ ದರೋಡೆ ಪ್ರಕರಣದಲ್ಲಿ 30 ವರ್ಷದ ಮಹಿಳೆ ಮತ್ತು ಆಕೆಯ 8 ವರ್ಷದ ಮಗಳನ್ನು ಹತ್ಯೆ ಮಾಡಿದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ರಾಕೇಶ್ ಮತ್ತು ಆತನ ಸಹೋದರ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.</p>.<p class="title">ರಾಕೇಶನ ಕೃತ್ಯವನ್ನು ವಿರೋಧಿಸಿ 2010ರ ಡಿ. 18ರಂದು ಗುಂಪೊಂದು ಪ್ರತಿಭಟನೆ ನಡೆಸಿತ್ತು. ಕೋಥಿವಾಲ್ ನಗರದಲ್ಲಿದ್ದ ರಾಕೇಶನ ಮನೆಯ ಹೊರಗೆ ಜಮಾಯಿಸಿದ್ದ ಗುಂಪು ಆತನ ತಾಯಿ ಮತ್ತು ಸಹೋದರಿಯರಿಗೆ ಬೆಂಕಿ ಹಚ್ಚಿತ್ತು. ಈ ವೇಳೆ ಆರೋಪಿಯ ತಾಯಿ ರಾಜೋ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಹೋದರಿಯರಾದ ಗೀತಾ (22) ಮತ್ತು ಮೋನು (20) ಸಜೀವವಾಗಿ ದಹನವಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುರಾದಾಬಾದ್:</strong> ಉತ್ತರಪ್ರದೇಶದ ಮುರಾದಾಬಾದ್ನಲ್ಲಿ 2010ರಲ್ಲಿ ನಡೆದಿದ್ದ ಇಬ್ಬರು ದಲಿತ ಸಹೋದರಿಯರ ಸಜೀವ ದಹನ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾದ 7 ಮಂದಿಗೆ ಪರಿಶಿಷ್ಟಜಾತಿ–ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.</p>.<p class="title">ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಆನಂದ್ ಪಾಲ್ ಸಿಂಗ್ ಅವರು ಮಂಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಏಳು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಮೂರ್ತಿ ಸಂಧ್ಯಾ ಚೌಧರಿ ಅವರು 26 ಪುಟಗಳ ಆದೇಶ ನೀಡಿದ್ದಾರೆ.</p>.<p class="title">ಆರೋಪಿಗಳಾದ ಸತೀಶ್ ಮದನ್, ಸಾಗರ್ ಭಂಡುಲಾ, ಬಂಟಿ ಮಲಿಕ್, ಆಶಾ ಸಚ್ದೇವ, ಅಮರ್ಜೀತ್ ಕೌರ್, ವಿನೋದ್ ಕಾಜಕಾಡ್ ಮತ್ತು ಸಾನಿಯಾ ಕೊಹ್ಲಿ ಅವರನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಲಯವು ಅವರಿಗೆ ತಲಾ ₹ 1ಲಕ್ಷ ದಂಡ ವಿಧಿಸಿದೆ.</p>.<p class="title"><strong>ಘಟನೆಯ ವಿವರಣೆ: </strong>ಸ್ವಚ್ಛತಾ ಕಾರ್ಮಿಕ ಮಹಿಳೆ ರಾಜೋ ಅವರ ಮಗ ರಾಕೇಶ್ ಮೇಲೆ 2010ರ ಡಿ. 9ರಂದು ನಡೆದ ದರೋಡೆ ಪ್ರಕರಣದಲ್ಲಿ 30 ವರ್ಷದ ಮಹಿಳೆ ಮತ್ತು ಆಕೆಯ 8 ವರ್ಷದ ಮಗಳನ್ನು ಹತ್ಯೆ ಮಾಡಿದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ರಾಕೇಶ್ ಮತ್ತು ಆತನ ಸಹೋದರ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.</p>.<p class="title">ರಾಕೇಶನ ಕೃತ್ಯವನ್ನು ವಿರೋಧಿಸಿ 2010ರ ಡಿ. 18ರಂದು ಗುಂಪೊಂದು ಪ್ರತಿಭಟನೆ ನಡೆಸಿತ್ತು. ಕೋಥಿವಾಲ್ ನಗರದಲ್ಲಿದ್ದ ರಾಕೇಶನ ಮನೆಯ ಹೊರಗೆ ಜಮಾಯಿಸಿದ್ದ ಗುಂಪು ಆತನ ತಾಯಿ ಮತ್ತು ಸಹೋದರಿಯರಿಗೆ ಬೆಂಕಿ ಹಚ್ಚಿತ್ತು. ಈ ವೇಳೆ ಆರೋಪಿಯ ತಾಯಿ ರಾಜೋ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಹೋದರಿಯರಾದ ಗೀತಾ (22) ಮತ್ತು ಮೋನು (20) ಸಜೀವವಾಗಿ ದಹನವಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>