‘ಮಂಗನಿಗೆ ವಯಸ್ಸಾಗಿತ್ತು ಮತ್ತು ಅನಾರೋಗ್ಯದಿಂದ ಬಳಲುತ್ತಿತ್ತು. ಮಂಗಳವಾರ ಅದರ ಮೃತದೇಹ ಸಿಕ್ಕಿದೆ. ನಮ್ಮ ಠಾಣೆಯ ಸಿಬ್ಬಂದಿಯು ಅದರೊಂದಿಗೆ ಆತ್ಮೀಯತೆ ಹೊಂದಿದ್ದರು. ಅದು ನಮ್ಮ ಕುಟುಂಬದ ಭಾಗವಾಗಿತ್ತು. ಅದರ ಸಾವಿನಿಂದ ನಮಗೆ ಆಘಾತವಾಗಿದೆ. ಹಾಗಾಗಿ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬದಲು ನಾವೇ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಿದೆವು’ ಎಂದು ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಬಿಜಯಿನಿ ಮಲ್ಹಾ ಮಾಹಿತಿ ನೀಡಿದರು.