ಭೊಪಾಲ್: ಕೋವಿಡ್ ಲಸಿಕೆ ಬಗ್ಗೆ ನೀವು ಸುಳ್ಳುಗಳನ್ನು ಹರಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಭರವಸೆ ನೀಡಿದ್ದಾರೆ. ಆದರೆ ನೀವು (ರಾಹುಲ್ ಗಾಂಧಿ) ಲಸಿಕೆ ಬಗ್ಗೆ ಹರಡುತ್ತಿರುವ ಸುಳ್ಳುಗಳು, ತಪ್ಪು ಗ್ರಹಿಕೆಗಳು ಜನರ ಜೀವವನ್ನು ಅಪಾಯಕ್ಕೆ ದೂಡುತ್ತಿವೆ ಎಂದು ಚೌಹಾಣ್ ಹೇಳಿರುವುದಾಗಿ ‘ಎಎನ್ಐ’ ಟ್ವೀಟ್ ಮಾಡಿದೆ.
ಬೈತೂಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಜನರ ಜತೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿಯವರು, ಲಸಿಕೆ ಕುರಿತು ಗ್ರಾಮಸ್ಥರಲ್ಲಿ ಇರುವ ಹಿಂಜರಿಕೆ ತೊಲಗಿಸಲು ಯತ್ನಿಸಿದ್ದಾರೆ ಎಂದೂ ಚೌಹಾಣ್ ಹೇಳಿದ್ದಾರೆ.
PM Modi ensured free vaccination for all in the country but you (Rahul Gandhi) are spreading lies, misconceptions&putting people's lives in danger. While,PM spoke to villagers of Dulariya,counseled them to take vaccine&cleared their doubts regarding vaccination: Madhya Pradesh CM pic.twitter.com/BG8vdDiDgB