<p><strong>ಮುಂಬೈ: </strong>ಮುಂಬೈ ಹೊರವಲಯದ ಮನ್ಖುರ್ದ್ಎಂಬಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾರ್ಯಾಚರಣೆ ನಡೆಸಿ ₹ 21.30 ಕೋಟಿ ಮೌಲ್ಯದ 7 ಕೆ.ಜಿ ಯುರೇನಿಯಂ ಜಪ್ತಿ ಮಾಡಿದೆ.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗರ್ ಪಾಂಡ್ಯ ಹಾಗೂ ಅಬು ತಾಹಿರ್ ಅಫ್ಜಲ್ ಹುಸೇನ್ ಚೌಧರಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 12 ರ ವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಜಪ್ತಿ ಮಾಡಿದ ಯುರೇನಿಯಂಅನ್ನು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ವಿಶ್ಲೇಷಿಸಿ, ವರದಿ ನೀಡಿದ್ದಾರೆ. ಅಧಿಕ ವಿಕಿರಣ ಹೊರಸೂಸುವ ಈ ಮೂಲಧಾತು, ಮಾನವನ ಜೀವಕ್ಕೆ ಅಪಾಯ ತರಬಲ್ಲದು ಎಂಬುದಾಗಿ ವಿಜ್ಞಾನಿಗಳು ವರದಿಯಲ್ಲಿ ವಿವರಿಸಿದ್ದಾರೆ’ ಎಂದು ಎಟಿಎಸ್ನ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಠಾಣೆ ನಿವಾಸಿ, 27 ವರ್ಷದ ಜಿಗರ್ ಪಾಂಡ್ಯ ಎಂಬ ವ್ಯಕ್ತಿ ಯುರೇನಿಯಂನ ಕೆಲವು ತುಣುಕುಗಳನ್ನು ಹೊಂದಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಎಟಿಎಸ್ನ ನಾಗಪಡ ಘಟಕದ ಅಧಿಕಾರಿಗಳು ಆತನನ್ನು ಫೆಬ್ರುವರಿ 14ರಂದು ವಶಕ್ಕೆ ಪಡೆದರು.</p>.<p>‘ಯುರೇನಿಯಂ ತುಣುಕುಗಳನ್ನು ಮಾರಾಟ ಮಾಡಲು ಗ್ರಾಹಕನಿಗಾಗಿ ಹುಡುಕುತ್ತಿದ್ದೆ. ಇವುಗಳನ್ನು ಮನ್ಖುರ್ದ್ ನಿವಾಸಿ ಅಬು ತಾಹಿರ್ ಅಫ್ಜಲ್ ಹುಸೇನ್ ಚೌಧರಿ (31) ತನಗೆ ನೀಡಿದ್ದ ಎಂಬುದಾಗಿ ಜಿಗರ್ ಪಾಂಡ್ಯ ವಿಚಾರಣೆಗೆ ತಿಳಿಸಿದ’ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ನಂತರ, ಕುರ್ಲಾ ಸ್ಕ್ರಾಪ್ ಅಸೋಸಿಯೇಶನ್ಗೆ ಸೇರಿದ ಕಟ್ಟಡದಲ್ಲಿ ಎಟಿಎಸ್ ಅಧಿಕಾರಿಗಳು ಚೌಧರಿಯನ್ನು ಬಂಧಿಸಿದರು. ಅದೇ ಸ್ಥಳದಲ್ಲಿ 7.1 ಕೆ.ಜಿ ಕಚ್ಚಾ ಯುರೇನಿಯಂ ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.</p>.<p>ನಾಗಪುರದಲ್ಲಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರು ನೀಡಿದ ದೂರಿನನ್ವಯ, ಬಂಧಿತರ ವಿರುದ್ಧ ಪರಮಾಣು ಇಂಧನ ಕಾಯ್ದೆ–1962 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಮುಂಬೈ ಹೊರವಲಯದ ಮನ್ಖುರ್ದ್ಎಂಬಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾರ್ಯಾಚರಣೆ ನಡೆಸಿ ₹ 21.30 ಕೋಟಿ ಮೌಲ್ಯದ 7 ಕೆ.ಜಿ ಯುರೇನಿಯಂ ಜಪ್ತಿ ಮಾಡಿದೆ.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗರ್ ಪಾಂಡ್ಯ ಹಾಗೂ ಅಬು ತಾಹಿರ್ ಅಫ್ಜಲ್ ಹುಸೇನ್ ಚೌಧರಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 12 ರ ವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಜಪ್ತಿ ಮಾಡಿದ ಯುರೇನಿಯಂಅನ್ನು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ವಿಶ್ಲೇಷಿಸಿ, ವರದಿ ನೀಡಿದ್ದಾರೆ. ಅಧಿಕ ವಿಕಿರಣ ಹೊರಸೂಸುವ ಈ ಮೂಲಧಾತು, ಮಾನವನ ಜೀವಕ್ಕೆ ಅಪಾಯ ತರಬಲ್ಲದು ಎಂಬುದಾಗಿ ವಿಜ್ಞಾನಿಗಳು ವರದಿಯಲ್ಲಿ ವಿವರಿಸಿದ್ದಾರೆ’ ಎಂದು ಎಟಿಎಸ್ನ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಠಾಣೆ ನಿವಾಸಿ, 27 ವರ್ಷದ ಜಿಗರ್ ಪಾಂಡ್ಯ ಎಂಬ ವ್ಯಕ್ತಿ ಯುರೇನಿಯಂನ ಕೆಲವು ತುಣುಕುಗಳನ್ನು ಹೊಂದಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಎಟಿಎಸ್ನ ನಾಗಪಡ ಘಟಕದ ಅಧಿಕಾರಿಗಳು ಆತನನ್ನು ಫೆಬ್ರುವರಿ 14ರಂದು ವಶಕ್ಕೆ ಪಡೆದರು.</p>.<p>‘ಯುರೇನಿಯಂ ತುಣುಕುಗಳನ್ನು ಮಾರಾಟ ಮಾಡಲು ಗ್ರಾಹಕನಿಗಾಗಿ ಹುಡುಕುತ್ತಿದ್ದೆ. ಇವುಗಳನ್ನು ಮನ್ಖುರ್ದ್ ನಿವಾಸಿ ಅಬು ತಾಹಿರ್ ಅಫ್ಜಲ್ ಹುಸೇನ್ ಚೌಧರಿ (31) ತನಗೆ ನೀಡಿದ್ದ ಎಂಬುದಾಗಿ ಜಿಗರ್ ಪಾಂಡ್ಯ ವಿಚಾರಣೆಗೆ ತಿಳಿಸಿದ’ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ನಂತರ, ಕುರ್ಲಾ ಸ್ಕ್ರಾಪ್ ಅಸೋಸಿಯೇಶನ್ಗೆ ಸೇರಿದ ಕಟ್ಟಡದಲ್ಲಿ ಎಟಿಎಸ್ ಅಧಿಕಾರಿಗಳು ಚೌಧರಿಯನ್ನು ಬಂಧಿಸಿದರು. ಅದೇ ಸ್ಥಳದಲ್ಲಿ 7.1 ಕೆ.ಜಿ ಕಚ್ಚಾ ಯುರೇನಿಯಂ ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.</p>.<p>ನಾಗಪುರದಲ್ಲಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರು ನೀಡಿದ ದೂರಿನನ್ವಯ, ಬಂಧಿತರ ವಿರುದ್ಧ ಪರಮಾಣು ಇಂಧನ ಕಾಯ್ದೆ–1962 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>