<p><strong>ನಾಸಿಕ್:</strong> ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್ಎಂಎ) ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಬೇಕಾದ ₹16 ಕೋಟಿ ಮೌಲ್ಯದ ಔಷಧಿಯನ್ನು ಅಮೆರಿಕದ ಔಷಧಿ ಸಂಸ್ಥೆಯೊಂದು ಉಚಿತವಾಗಿ ನೀಡಿದೆ.</p>.<p>ಮಹಾರಾಷ್ಟ್ರದ ನಾಸಿಕ್ನಲ್ಲಿ 2019ರ ಆಗಸ್ಟ್ 8, 2019ರಲ್ಲಿ ಜನಿಸಿದ ಶಿವರಾಜ್, ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕಾಯಿಲೆಯ ಚಿಕಿತ್ಸೆಗೆ ಝೊಲ್ಗೆನ್ಸ್ಮಾ ಔಷಧಿಯ ಅವಶ್ಯಕತೆ ಇದೆ ಎಂಬುದಾಗಿ ಡಾ.ಬ್ರಿಜೇಶ್ ಉದಾನಿ ಅವರು ತಿಳಿಸಿದ್ದಾರೆ. ಈ ಔಷಧಿಯನ್ನು ಅಮೆರಿಕ ಮೂಲದ ಸಂಸ್ಥೆ ತಯಾರಿಸುತ್ತದೆ.</p>.<p>ಮಗುವಿನ ತಂದೆ ವಿಶಾಲ್ ದವಾರೆ ಮತ್ತು ತಾಯಿ ಕಿರಣ್ ಅವರು ಮಧ್ಯಮ ವರ್ಗಕ್ಕೆ ಸೇರಿದವರು. ಈ ದುಬಾರಿ ಔಷಧಿಯನ್ನು ಖರೀದಿಸುವಷ್ಟು ಶಕ್ತಿ ಅವರಿಗೆ ಇರಲಿಲ್ಲ. ಹಾಗಾಗಿ ಡಾ. ಬ್ರಿಜೇಶ್ ಉದಾನಿ ಅವರು ಅಮೆರಿಕದ ಔಷಧಿ ಸಂಸ್ಥೆ ನಡೆಸುವ ಲಕ್ಕಿ ಡ್ರಾದಲ್ಲಿ ಭಾಗವಹಿಸುವಂತೆ ದಂಪತಿಗೆ ಸಲಹೆ ನೀಡಿದ್ದರು.</p>.<p>2020ರ ಡಿಸೆಂಬರ್ 25ರಂದು ಶಿವರಾಜ್ ಈ ಲಕ್ಕಿ ಡ್ರಾದಲ್ಲಿ ಆಯ್ಕೆ ಆಗಿದ್ದಾನೆ. ಹಾಗಾಗಿ ಸಂಸ್ಥೆಯು ಮಗುವಿನ ಚಿಕಿತ್ಸೆಗೆ ಬೇಕಾದ ಝೊಲ್ಗೆನ್ಸ್ಮಾ ಔಷಧಿಯನ್ನು ಶಿವರಾಜ್ ಕುಟುಂಬಕ್ಕೆ ಉಚಿತವಾಗಿ ನೀಡಿದೆ. ಕಳೆದ ಜನವರಿ 19ರಂದು ಮಗುವಿಗೆ ಹಿಂದೂಜ್ ಆಸ್ಪತ್ರೆಯಲ್ಲಿ ಝೊಲ್ಗೆನ್ಸ್ಮಾ ಇಂಜೆಕ್ಷನ್ ನೀಡಲಾಗಿದೆ.</p>.<p>‘ಈ ಕಾಯಿಲೆಯು ಮಗುವಿನ ಚಲನೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ ಇದರಿಂದಾಗಿ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದು ಮಗುವಿನ ಸಾವಿಗೆ ಕಾರಣವಾಗುತ್ತದೆ’ ಎಂದು ಶಿವರಾಜ್ಗೆ ಮೊದಲು ಚಿಕಿತ್ಸೆ ನೀಡಿದ್ದ ಡಾ. ರಮಂತ್ ಪಾಟೀಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಸಿಕ್:</strong> ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್ಎಂಎ) ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಬೇಕಾದ ₹16 ಕೋಟಿ ಮೌಲ್ಯದ ಔಷಧಿಯನ್ನು ಅಮೆರಿಕದ ಔಷಧಿ ಸಂಸ್ಥೆಯೊಂದು ಉಚಿತವಾಗಿ ನೀಡಿದೆ.</p>.<p>ಮಹಾರಾಷ್ಟ್ರದ ನಾಸಿಕ್ನಲ್ಲಿ 2019ರ ಆಗಸ್ಟ್ 8, 2019ರಲ್ಲಿ ಜನಿಸಿದ ಶಿವರಾಜ್, ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನನ್ನು ಹಿಂದೂಜಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಕಾಯಿಲೆಯ ಚಿಕಿತ್ಸೆಗೆ ಝೊಲ್ಗೆನ್ಸ್ಮಾ ಔಷಧಿಯ ಅವಶ್ಯಕತೆ ಇದೆ ಎಂಬುದಾಗಿ ಡಾ.ಬ್ರಿಜೇಶ್ ಉದಾನಿ ಅವರು ತಿಳಿಸಿದ್ದಾರೆ. ಈ ಔಷಧಿಯನ್ನು ಅಮೆರಿಕ ಮೂಲದ ಸಂಸ್ಥೆ ತಯಾರಿಸುತ್ತದೆ.</p>.<p>ಮಗುವಿನ ತಂದೆ ವಿಶಾಲ್ ದವಾರೆ ಮತ್ತು ತಾಯಿ ಕಿರಣ್ ಅವರು ಮಧ್ಯಮ ವರ್ಗಕ್ಕೆ ಸೇರಿದವರು. ಈ ದುಬಾರಿ ಔಷಧಿಯನ್ನು ಖರೀದಿಸುವಷ್ಟು ಶಕ್ತಿ ಅವರಿಗೆ ಇರಲಿಲ್ಲ. ಹಾಗಾಗಿ ಡಾ. ಬ್ರಿಜೇಶ್ ಉದಾನಿ ಅವರು ಅಮೆರಿಕದ ಔಷಧಿ ಸಂಸ್ಥೆ ನಡೆಸುವ ಲಕ್ಕಿ ಡ್ರಾದಲ್ಲಿ ಭಾಗವಹಿಸುವಂತೆ ದಂಪತಿಗೆ ಸಲಹೆ ನೀಡಿದ್ದರು.</p>.<p>2020ರ ಡಿಸೆಂಬರ್ 25ರಂದು ಶಿವರಾಜ್ ಈ ಲಕ್ಕಿ ಡ್ರಾದಲ್ಲಿ ಆಯ್ಕೆ ಆಗಿದ್ದಾನೆ. ಹಾಗಾಗಿ ಸಂಸ್ಥೆಯು ಮಗುವಿನ ಚಿಕಿತ್ಸೆಗೆ ಬೇಕಾದ ಝೊಲ್ಗೆನ್ಸ್ಮಾ ಔಷಧಿಯನ್ನು ಶಿವರಾಜ್ ಕುಟುಂಬಕ್ಕೆ ಉಚಿತವಾಗಿ ನೀಡಿದೆ. ಕಳೆದ ಜನವರಿ 19ರಂದು ಮಗುವಿಗೆ ಹಿಂದೂಜ್ ಆಸ್ಪತ್ರೆಯಲ್ಲಿ ಝೊಲ್ಗೆನ್ಸ್ಮಾ ಇಂಜೆಕ್ಷನ್ ನೀಡಲಾಗಿದೆ.</p>.<p>‘ಈ ಕಾಯಿಲೆಯು ಮಗುವಿನ ಚಲನೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ ಇದರಿಂದಾಗಿ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದು ಮಗುವಿನ ಸಾವಿಗೆ ಕಾರಣವಾಗುತ್ತದೆ’ ಎಂದು ಶಿವರಾಜ್ಗೆ ಮೊದಲು ಚಿಕಿತ್ಸೆ ನೀಡಿದ್ದ ಡಾ. ರಮಂತ್ ಪಾಟೀಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>