<p class="title"><strong>ಪಾಲ್ಗಾರ್, ಮಹಾರಾಷ್ಟ್ರ:</strong> ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತಾರಾಪುರ ಎಂಐಡಿಸಿ ವಲಯದಲ್ಲಿರುವ ಸುಮಾರು 100 ಕೈಗಾರಿಕಾ ಘಟಕಗಳಿಗೆ, ಜಲಮೂಲ ಕಲುಷಿತಗೊಳಿಸಿದ್ದಕ್ಕಾಗಿ ಒಟ್ಟು ₹ 186 ಕೋಟಿ ಪರಿಹಾರ ಭರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶಿಸಿದೆ.</p>.<p>ಈ ಕೈಗಾರಿಕಾ ಘಟಕಗಳ ಜೊತೆಗೆ ತಾರಾಪುರ ಪರಿಸರ ರಕ್ಷಣಾ ಸೊಸೈಟಿಯ ಕೇಂದ್ರ ಶುದ್ಧೀಕರಣ ಘಟಕವು (ಸಿಇಟಿಪಿ) ₹ 91.79 ಕೋಟಿ ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವು ₹ 2 ಕೋಟಿ ಪರಿಹಾರ ಪಾವತಿಸಬೇಕು ಎಂದೂ ಆದೇಶಿಸಿದೆ.</p>.<p>ಈ ಮೊತ್ತವನ್ನು ಬಳಸಿ ಈ ಭಾಗದಲ್ಲಿ ಪರಿಸರವನ್ನು ಸುಸ್ಥಿತಿಯಲ್ಲಿಡುವ ಹಾಗೂ ಸ್ಥಳೀಯ ಜನರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಬಳಸಬೇಕು. ಇದರ ಮೇಲ್ವಿಚಾರಣೆಯನ್ನು ಸಮಿತಿಯು ನಡೆಸಬೇಕು ಎಂದು ತನ್ನ 500 ಪುಟಗಳ ಆದೇಶದಲ್ಲಿ ತಿಳಿಸಿದೆ.</p>.<p>ಜನವರಿ 24ರಂದು ಈ ಕುರಿತು ಆದೇಶ ಹೊರಬಿದ್ದಿದೆ. ಜಲಮೂಲಗಳಿಗೆ ಕಲುಷಿತ ನೀರು ಹರಿಸಿರುವ ಕೈಗಾರಿಕಾ ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅನ್ವಯ ಕಠಿಣಕ್ರಮ ಜರುಗಿಸದ ಜಾರಿ ನಿರ್ದೇಶನಾಲಯದ ವಿರುದ್ಧವು ಎನ್ಜಿಟಿ ಹರಿಹಾಯ್ದಿದೆ.</p>.<p>‘ಕ್ರಮಕೈಗೊಳ್ಳದಿರುವುದು ಈ ಕಾರ್ಖಾನೆಗಳು ನಿಯಮವನ್ನು ಉಲ್ಲಂಘಿಸಲು ಪ್ರೇರೇಪಣೆ ನೀಡಿದಂತಾಗಿದೆ. ಪಿಎಂಎಲ್ಎ ಕಾಯ್ದೆಗೆ 2013ರಲ್ಲಿಯೇ ತಿದ್ದುಪಡಿ ಆಗಿದೆ. ಆದರೂ ಇ.ಡಿ ಕೆಲ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಕ್ರಮಜರುಗಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿತು.</p>.<p>ಮಹಾರಾಷ್ಟ್ರದ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ಅಧಿಕಾರಿಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಎನ್ಜಿಟಿ, ‘ಎಂಪಿಸಿಬಿ ಅತೀವ ನಿರ್ಲಕ್ಯ ತೋರಿದೆ. ಕರ್ತವ್ಯ ನಿರ್ವಹಿಸುವಲ್ಲಿ ಬೆನ್ನುಮೂಳೆ ಇಲ್ಲದಂತೆ ನಡೆದುಕೊಂಡಿದೆ’ ಎಂದು ಹೇಳಿದೆ.</p>.<p>ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ನಿಗಮವು (ಎಂಐಡಿಸಿ) ಅಧಿಕಾರಿಗಳೂ ನಿರ್ಲಕ್ಷ್ಯತೋರಿದ್ದಾರೆ. ಒಳಚರಂಡಿ ವ್ಯವಸ್ಥೆ ಕೊಳವೆ ಮಾರ್ಗ ಸುಸ್ಥಿತಿಯಲ್ಲಿಡುವುದು, ನಿಯಮಿತವಾಗಿ ಕಲ್ಮಶ ತೆಗೆಯುವ ಕಾರ್ಯವನ್ನು ಪರಿಶೀಲಿಸಿಲ್ಲ. ಇದು ಕೂಡಾ ಜಲಮೂಲ ಕಲುಷಿತಗೊಳ್ಳಲು ಕಾರಣವಾಗಿದೆ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪಾಲ್ಗಾರ್, ಮಹಾರಾಷ್ಟ್ರ:</strong> ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತಾರಾಪುರ ಎಂಐಡಿಸಿ ವಲಯದಲ್ಲಿರುವ ಸುಮಾರು 100 ಕೈಗಾರಿಕಾ ಘಟಕಗಳಿಗೆ, ಜಲಮೂಲ ಕಲುಷಿತಗೊಳಿಸಿದ್ದಕ್ಕಾಗಿ ಒಟ್ಟು ₹ 186 ಕೋಟಿ ಪರಿಹಾರ ಭರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಆದೇಶಿಸಿದೆ.</p>.<p>ಈ ಕೈಗಾರಿಕಾ ಘಟಕಗಳ ಜೊತೆಗೆ ತಾರಾಪುರ ಪರಿಸರ ರಕ್ಷಣಾ ಸೊಸೈಟಿಯ ಕೇಂದ್ರ ಶುದ್ಧೀಕರಣ ಘಟಕವು (ಸಿಇಟಿಪಿ) ₹ 91.79 ಕೋಟಿ ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವು ₹ 2 ಕೋಟಿ ಪರಿಹಾರ ಪಾವತಿಸಬೇಕು ಎಂದೂ ಆದೇಶಿಸಿದೆ.</p>.<p>ಈ ಮೊತ್ತವನ್ನು ಬಳಸಿ ಈ ಭಾಗದಲ್ಲಿ ಪರಿಸರವನ್ನು ಸುಸ್ಥಿತಿಯಲ್ಲಿಡುವ ಹಾಗೂ ಸ್ಥಳೀಯ ಜನರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಬಳಸಬೇಕು. ಇದರ ಮೇಲ್ವಿಚಾರಣೆಯನ್ನು ಸಮಿತಿಯು ನಡೆಸಬೇಕು ಎಂದು ತನ್ನ 500 ಪುಟಗಳ ಆದೇಶದಲ್ಲಿ ತಿಳಿಸಿದೆ.</p>.<p>ಜನವರಿ 24ರಂದು ಈ ಕುರಿತು ಆದೇಶ ಹೊರಬಿದ್ದಿದೆ. ಜಲಮೂಲಗಳಿಗೆ ಕಲುಷಿತ ನೀರು ಹರಿಸಿರುವ ಕೈಗಾರಿಕಾ ಘಟಕಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅನ್ವಯ ಕಠಿಣಕ್ರಮ ಜರುಗಿಸದ ಜಾರಿ ನಿರ್ದೇಶನಾಲಯದ ವಿರುದ್ಧವು ಎನ್ಜಿಟಿ ಹರಿಹಾಯ್ದಿದೆ.</p>.<p>‘ಕ್ರಮಕೈಗೊಳ್ಳದಿರುವುದು ಈ ಕಾರ್ಖಾನೆಗಳು ನಿಯಮವನ್ನು ಉಲ್ಲಂಘಿಸಲು ಪ್ರೇರೇಪಣೆ ನೀಡಿದಂತಾಗಿದೆ. ಪಿಎಂಎಲ್ಎ ಕಾಯ್ದೆಗೆ 2013ರಲ್ಲಿಯೇ ತಿದ್ದುಪಡಿ ಆಗಿದೆ. ಆದರೂ ಇ.ಡಿ ಕೆಲ ಸೀಮಿತ ಚೌಕಟ್ಟಿನಲ್ಲಿ ಮಾತ್ರವೇ ಕ್ರಮಜರುಗಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿತು.</p>.<p>ಮಹಾರಾಷ್ಟ್ರದ ಮಾಲಿನ್ಯ ನಿಯಂತ್ರಣ ಮಂಡಳಿ (ಎಂಪಿಸಿಬಿ) ಅಧಿಕಾರಿಗಳ ವಿರುದ್ಧವೂ ವಾಗ್ದಾಳಿ ನಡೆಸಿರುವ ಎನ್ಜಿಟಿ, ‘ಎಂಪಿಸಿಬಿ ಅತೀವ ನಿರ್ಲಕ್ಯ ತೋರಿದೆ. ಕರ್ತವ್ಯ ನಿರ್ವಹಿಸುವಲ್ಲಿ ಬೆನ್ನುಮೂಳೆ ಇಲ್ಲದಂತೆ ನಡೆದುಕೊಂಡಿದೆ’ ಎಂದು ಹೇಳಿದೆ.</p>.<p>ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ನಿಗಮವು (ಎಂಐಡಿಸಿ) ಅಧಿಕಾರಿಗಳೂ ನಿರ್ಲಕ್ಷ್ಯತೋರಿದ್ದಾರೆ. ಒಳಚರಂಡಿ ವ್ಯವಸ್ಥೆ ಕೊಳವೆ ಮಾರ್ಗ ಸುಸ್ಥಿತಿಯಲ್ಲಿಡುವುದು, ನಿಯಮಿತವಾಗಿ ಕಲ್ಮಶ ತೆಗೆಯುವ ಕಾರ್ಯವನ್ನು ಪರಿಶೀಲಿಸಿಲ್ಲ. ಇದು ಕೂಡಾ ಜಲಮೂಲ ಕಲುಷಿತಗೊಳ್ಳಲು ಕಾರಣವಾಗಿದೆ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>