ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಮೂರು ತಂಡ, ಸ್ಥಳೀಯ ಆಡಳಿತ, ರಾಜ್ಯ ಪೊಲೀಸ್, ಭಾರತೀಯ ಸೇನೆ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಅವಶೇಷಗಳ ಅಡಿ ಸಿಲುಕಿದ್ದ 20 ಮೃತದೇಹಗಳನ್ನು ಹೊರಕ್ಕೆ ತೆಗೆದಿವೆ. ಎನ್ಡಿಆರ್ಎಫ್ ತಂಡ ಆಗಮನಕ್ಕೂ ಮುನ್ನ ಗಾಯಗೊಂಡಿದ್ದ 18 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.