ಈ ಕೃತ್ಯವೆಸಗಿದ ಗುತ್ತಿಗೆ ನೌಕರರರಾದ ಡಾರ ಶ್ರೀಕಾಂತ್, ಚೆನ್ನಬಾಬು ರಾವ್ ಮತ್ತು ಜೆ.ಪವನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಏಪ್ರಿಲ್ 19ರ ರಾತ್ರಿ ಡಾರ ಶ್ರೀಕಾಂತ್ ಎಂಬ ಆರೋಪಿಯು, ವಿಜಯವಾಡದ ವಾಂಬೆ ಕಾಲೋನಿಯ 23 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದು, ಲಿಫ್ಟ್ ಪಕ್ಕದಲ್ಲಿರುವ ಸಣ್ಣ ಕೊಠಡಿಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮಾರನೇ ದಿನ ಇದೇ ಕೊಠಡಿಯಲ್ಲಿ ಮತ್ತಿಬ್ಬರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.