‘ದೇಶದ ಪ್ರಗತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡು ಸ್ತಂಭಗಳಿದ್ದಂತೆ. ಕಳೆದ ಕೆಲವು ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಆಮ್ ಆದ್ಮಿ ಪಕ್ಷ ಮತ್ತು ಅರವಿಂದ ಕೇಜ್ರಿವಾಲ್ಗೆ ಯುವ ಜನತೆಯ ಮೇಲೆ ನಂಬಿಕೆಯಿದೆ. ಎಎಪಿ ಕುಟುಂಬವು ದಿನ ಕಳೆಯುತ್ತಿದ್ದಂತೆ ದೊಡ್ಡದಾಗುತ್ತಿದೆ. ನಮ್ಮ ಈ ಎಎಪಿ ಕುಟುಂಬಕ್ಕೆ ಮಾನ್ಸಿ ಸೆಹಗಲ್ ಅವರಿಗೂ ಸ್ವಾಗತ’ ಎಂದು ರಾಘವ್ ಛಡ್ಡಾ ಹೇಳಿದರು.