‘ಮಹಿದ್ಪುರ ಪಟ್ಟಣದ ನಿವಾಸಿ ಅಬ್ದುಲ್ ರಶೀದ್ ಅವರು ಬಹಳ ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಿದ್ದಾರೆ. ಅವರು ತಮ್ಮ ಮಿನಿ ಟ್ರಕ್ನಲ್ಲಿ ಸಿಕ್ಲಿ ಗ್ರಾಮಕ್ಕೆ ಗುಜರಿ ವಸ್ತುಗಳ ಸಂಗ್ರಹಕ್ಕೆ ತೆರಳಿದ್ದಾಗ ಅವರನ್ನು ಗ್ರಾಮ ಬಿಟ್ಟು ತೆರಳುವಂತೆ ಒತ್ತಾಯಿಸಿ, ಮತ್ತೊಮ್ಮೆ ಇಲ್ಲಿ ಗುಜರಿ ವ್ಯಾಪಾರಕ್ಕೆ ಬಾರದಂತೆ ಬೆದರಿಕೆಯೊಡ್ಡಲಾಗಿದೆ. ಅಬ್ದುಲ್ ಗ್ರಾಮ ಬಿಟ್ಟು ತೆರಳುವಾಗ, ಪಿಪ್ಲಿಯಾ ಧುಮಾದ ಎನ್ನುವ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿ, ನಿಂದಿಸಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದಾರೆ. ಅವರ ಒತ್ತಡಕ್ಕೆ ಮಣಿದ ಅಬ್ದುಲ್ ನಂತರ ಅಲ್ಲಿಂದ ವಾಪಸ್ ಬಂದಿದ್ದಾರೆ’ ಎಂದು ಮಹಿದ್ಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಆರ್.ಕೆ. ರೈ ಸುದ್ದಿಗಾರರಿಗೆ ವಿವರಿಸಿದರು.