ಪಟ್ನಾ:ಹಿಂದೂ ದೇವತೆಗಳ ಕುರಿತು ಬಿಹಾರದ ಬಿಜೆಪಿ ಶಾಸಕ ಲಲನ್ ಪಾಸ್ವಾನ್ ಅವರು ನೀಡಿರುವ ಹೇಳಿಯೊಂದು ವಿವಾದಕ್ಕೆ ಗ್ರಾಸವಾಗಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿದೆ.ಲಕ್ಷ್ಮೀ, ಸರಸ್ವತಿ, ಹನುಮಂತನನ್ನು ಆರಾಧಿಸುವುದರಿಂದ ಸಿಗುವ ಭಾಗ್ಯವು ಈ ದೇವತೆಗಳನ್ನು ಆರಾಧಿಸದೇ ಇರುವವರಿಗೂ ಸಿಗುತ್ತದೆ ಎಂದು ಪಿರ್ಪೈಂತಿ ವಿಧಾನಸಭೆ ಶಾಸಕರಾದ ಲಲನ್ ಹೇಳಿದ್ದರು.