ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ: ಒವೈಸಿ
ಹೈದರಾಬಾದ್: ಮುಸ್ಲಿಮರು ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.
ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಯ ವೇಳೆ ಸೋಮವಾರ ಶಿವಲಿಂಗ ಪತ್ತೆಯಾಗಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ‘ನೀವು ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಮುಂದೊಂದು ದಿನ ಅದು ಹೊರಬರುತ್ತದೆ’ ಎಂದು ಟ್ವೀಟ್ ಮಾಡಿದ್ದರು.
‘ಹಿಂದೆ ದೇವಾಲಯವೊಂದು ಸ್ಥಳದಲ್ಲಿ ಇತ್ತು ಎಂಬುದನ್ನು ಸಮೀಕ್ಷೆ ಸಾಬೀತುಪಡಿಸಿದೆ’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೇಳಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ಟ್ವಿಟರ್ನಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅಸಾದುದ್ದೀನ್ ಒವೈಸಿ, ‘ಬಾಬರಿ ಮಸೀದಿಯನ್ನು ನಮ್ಮಿಂದ ಕಿತ್ತುಕೊಂಡಾಗ ನನಗಿನ್ನೂ 19-20 ವರ್ಷ. ಆದರೆ, ಈಗ ಅದೇ ಘಟನೆ ನಡೆಯಲು ನಾವು ಬಿಡುವುದಿಲ್ಲ. ಮತ್ತೊಂದು ಮಸೀದಿಯನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಮುಸ್ಲೀಮರು ಪ್ರತಿಜ್ಞೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.
‘ನಿಮ್ಮ ತಂತ್ರಗಳು ನಮಗೆ ತಿಳಿದಿವೆ. ನಮ್ಮನ್ನು ಮತ್ತೆ ಕೆಣಕಲು ನಾವು ಬಿಡುವುದಿಲ್ಲ’ ಎಂದು ಅವರು ಬಲಪಂಥೀಯ ಹಿಂದೂ ಸಂಘಟನೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
‘ವಾರಾಣಸಿಯಲ್ಲಿ ಮಸೀದಿ ಅಸ್ತಿತ್ವದಲ್ಲಿದೆ. ಅಲ್ಲಾ ಈ ಜಗತ್ತನ್ನು ಅಖಂಡವಾಗಿ ಇಡುವವರೆಗೂ, ಮಸೀದಿಯೂ ಅಖಂಡವಾಗಿ ಇರಲಿದೆ’ ಎಂದು ಅವರು ಹೇಳಿದರು.
When Babri Masjid judgement had come out, I’d expressed my apprehension that it will be used to make claims on other masjids. Today, this apprehension has turned out to be true. This clip is to remind the 6/9 PM Nationalists & those were lecturing us about closure & moving on pic.twitter.com/qt5SirXfS9
— Asaduddin Owaisi (@asadowaisi) May 16, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.