ಅಣ್ಣಾಮಲೈ ಅವರ ಈ ಮಾತುಗಳಿಗೆ ಕೆಲ ಮುಖಂಡರಿಂದ ತೀವ್ರ ವಿರೋಧ ವ್ಯಕ್ತ ವಾಯಿತು. ಸಭೆಯಲ್ಲಿದ್ದವರ ಪೈಕಿ ಕನಿಷ್ಠ ಇಬ್ಬರು ಮುಖಂಡರು, ‘ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ಕುರಿತು ಮಾತನಾಡುವ ಅಗತ್ಯವಿದೆಯೇ? ಇಂಥ ವಿಷಯಗಳ ಕುರಿತು ಬಿಜೆಪಿ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂಬುದಾಗಿ ಹೇಳಿದರು’ ಎನ್ನಲಾಗಿದೆ.