<p><strong>ಮುಂಬೈ:</strong> ಮುಂಬೈ ಸೆಂಟ್ರಲ್ ಮತ್ತು ಗುಜರಾತ್ನ ಗಾಂಧಿನಗರ ನಡುವಿನ ಮಾರ್ಗದಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಗೀಡಾಗಿದ್ದ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೇವಲ 24 ಗಂಟೆಗಳಲ್ಲೇ ದುರಸ್ತಿ ಮಾಡಲಾಗಿದೆ. ಈ ಮಧ್ಯೆ, ಎಮ್ಮೆಗಳ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳವು ಪ್ರಕರಣ ದಾಖಲಿಸಿದೆ.</p>.<p>ರೈಲಿನ ಮುಂಭಾಗವನ್ನು ಮುಂಬೈನಲ್ಲಿ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.</p>.<p>‘ಅಪಘಾತವಾದಾಗ ಅದರ ತೀವ್ರತೆಯಿಂದಾಗಿ ಎಂಜಿನ್ ಮತ್ತು ಇತರೆ ಭಾಗಗಳಿಗೆ ಹಾನಿಯಾಗದಂತೆ ರೈಲಿನ ಮುಂಬದಿಯನ್ನು ರೂಪಿಸಲಾಗಿದೆ. ಅದು ರೀಪ್ಲೇಸಬಲ್ ಕೂಡ (ಬದಲಿಸಬಹುದಾದ ಭಾಗ). ಹೀಗಾಗಿಯೇ ಗುದ್ದಿದ ರಭಸಕ್ಕೆ ಮುಂಬಾಗ ಮುರಿದುಬಿದ್ದಿದೆ. ಅದನ್ನು ಈಗ ಬದಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮುಂಬೈ ಸೆಂಟ್ರಲ್-ಗಾಂಧಿನಗರ ನಡುವಿನ ಹೊಸ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿನಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಮೃತಪಟ್ಟಿದ್ದರೆ, ರೈಲಿನ ಮುಂಬಾಗಕ್ಕೆ ಹಾನಿಯಾಗಿತ್ತು.</p>.<p>ಅಹಮದಾಬಾದ್ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲು ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ ಎಂದು ಡಬ್ಲ್ಯುಆರ್ನ ಹಿರಿಯ ವಕ್ತಾರ ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈ ಸೆಂಟ್ರಲ್ ಮತ್ತು ಗುಜರಾತ್ನ ಗಾಂಧಿನಗರ ನಡುವಿನ ಮಾರ್ಗದಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಗೀಡಾಗಿದ್ದ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೇವಲ 24 ಗಂಟೆಗಳಲ್ಲೇ ದುರಸ್ತಿ ಮಾಡಲಾಗಿದೆ. ಈ ಮಧ್ಯೆ, ಎಮ್ಮೆಗಳ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳವು ಪ್ರಕರಣ ದಾಖಲಿಸಿದೆ.</p>.<p>ರೈಲಿನ ಮುಂಭಾಗವನ್ನು ಮುಂಬೈನಲ್ಲಿ ಬದಲಾಯಿಸಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.</p>.<p>‘ಅಪಘಾತವಾದಾಗ ಅದರ ತೀವ್ರತೆಯಿಂದಾಗಿ ಎಂಜಿನ್ ಮತ್ತು ಇತರೆ ಭಾಗಗಳಿಗೆ ಹಾನಿಯಾಗದಂತೆ ರೈಲಿನ ಮುಂಬದಿಯನ್ನು ರೂಪಿಸಲಾಗಿದೆ. ಅದು ರೀಪ್ಲೇಸಬಲ್ ಕೂಡ (ಬದಲಿಸಬಹುದಾದ ಭಾಗ). ಹೀಗಾಗಿಯೇ ಗುದ್ದಿದ ರಭಸಕ್ಕೆ ಮುಂಬಾಗ ಮುರಿದುಬಿದ್ದಿದೆ. ಅದನ್ನು ಈಗ ಬದಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮುಂಬೈ ಸೆಂಟ್ರಲ್-ಗಾಂಧಿನಗರ ನಡುವಿನ ಹೊಸ ವಂದೇ ಭಾರತ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11.15 ರ ಸುಮಾರಿನಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಮೃತಪಟ್ಟಿದ್ದರೆ, ರೈಲಿನ ಮುಂಬಾಗಕ್ಕೆ ಹಾನಿಯಾಗಿತ್ತು.</p>.<p>ಅಹಮದಾಬಾದ್ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲು ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ ಎಂದು ಡಬ್ಲ್ಯುಆರ್ನ ಹಿರಿಯ ವಕ್ತಾರ ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>