ಮುಂಬೈ: ಮುಂಬೈ ಸೆಂಟ್ರಲ್ ಮತ್ತು ಗುಜರಾತ್ನ ಗಾಂಧಿನಗರ ನಡುವಿನ ಮಾರ್ಗದಲ್ಲಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಹಾನಿಗೀಡಾಗಿದ್ದ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕೇವಲ 24 ಗಂಟೆಗಳಲ್ಲೇ ದುರಸ್ತಿ ಮಾಡಲಾಗಿದೆ. ಈ ಮಧ್ಯೆ, ಎಮ್ಮೆಗಳ ಮಾಲೀಕನ ವಿರುದ್ಧ ರೈಲ್ವೆ ಭದ್ರತಾ ದಳವು ಪ್ರಕರಣ ದಾಖಲಿಸಿದೆ.