<p class="title"><strong>ಕೋಲ್ಕತ್ತ (ಪಿಟಿಐ):</strong> 2009ರಲ್ಲಿ ನಡೆದಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲು ಒತ್ತೆ ಪ್ರಕರಣದಲ್ಲಿ ಎನ್ಐಎ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದ್ದು, ತೃಣಮೂಲ ಕಾಂಗ್ರೆಸ್ ಸದಸ್ಯ ಛತ್ರಧರ್ ಮಹತೊ ಮತ್ತು ಇತರೆ 12 ಮಂದಿಯನ್ನು ಹೆಸರಿಸಿದೆ.</p>.<p class="title">ಮಹತೊ ಅವರು ಮಾವೋವಾದಿ ಬೆಂಬಲಿತ ಪೀಪಲ್ ಎಗೇನ್ಸ್ಟ್ ಪೊಲೀಸ್ ಅಟ್ರಾಸಿಟಿಸ್ (ಪಿಸಿಪಿಎ) ಸಂಘಟನೆಯ ಸಂಚಾಲಕ. ಇವರನ್ನು ಮುಖ್ಯ ಆರೋಪಿಯಾಗಿ, ಅವರ ಸಹೋದರ ಶಶಧರ್ ಮಹತೊ, ಮಾವೋವಾದಿ ಕಮಾಂಡರ್ ದಿವಂಗತ ಕ್ಷೇಂಜಿ ಅವರನ್ನು ಇತರೆ ಆರೋಪಿಗಳಾಗಿ 50 ಪುಟಗಳ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.</p>.<p class="title">ಈ ಎಲ್ಲ ಆರೋಪಿಗಳ ವಿರುದ್ಧಜಾಮೀನುರಹಿತವಾದ, ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕಗಳ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಮೊಕದ್ದಮೆ ದಾಖಲಿಸಲಾಗಿದೆ.</p>.<p>ಆರೋಪಿ ಕ್ಷೇಂಜಿ ನವೆಂಬರ್ 24, 2011ರಲ್ಲಿ ಕೋಬ್ರಾ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದರು. ಬಂಗಾಳ –ಜಾರ್ಖಂಡ್ ಗಡಿಯ ಮಿಡ್ನಾಪುರ್ ಪಶ್ಚಿಮ ಜಿಲ್ಲೆಯ ಅರಣ್ಯಭಾಗದಲ್ಲಿ ಬೃಹತ್ ಕಾರ್ಯಾಚರಣೆ ನಡೆದಿತ್ತು.</p>.<p>ಪತ್ರಕರ್ತನ ಸೋಗು ಧರಿಸಿದ್ದ ಛತ್ರಧರ್ ಮಹತೊರನ್ನು ಸೆಪ್ಟೆಂಬರ್ 2009ರಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ನಂತರ ಸಂತೋಷ್ ಪಾತ್ರಾ ಪಿಸಿಪಿಎ ಸಂಘಟನೆಯ ನಾಯಕತ್ವವನ್ನು ವಹಿಸಿಕೊಂಡಿದ್ದರು, ಪಿಸಿಪಿಎ ಅಕ್ಟೋಬರ್ 27, 2009ರಲ್ಲಿ ದೆಹಲಿ –ಭುವನೇಶ್ವರ ರಾಜಧಾನಿ ಎಕ್ಸ್ಪ್ರೆಸ್ ರೈಲು ಒತ್ತೆಯಾಗಿರಿಸಿಕೊಂಡಿತ್ತು.</p>.<p>ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಹತೊ 11 ವರ್ಷಗಳ ನಂತರ ಫೆಬ್ರುವರಿ 2020ರಲ್ಲಿ ಬಿಡುಗಡೆಯಾಗಿದ್ದರು. ಹಿಂದೆಯೇ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೇ ವರ್ಷ ಮಾರ್ಚ್ 26ರಂದು ಎನ್ಐಎ ಇವರನ್ನು ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೋಲ್ಕತ್ತ (ಪಿಟಿಐ):</strong> 2009ರಲ್ಲಿ ನಡೆದಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲು ಒತ್ತೆ ಪ್ರಕರಣದಲ್ಲಿ ಎನ್ಐಎ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದ್ದು, ತೃಣಮೂಲ ಕಾಂಗ್ರೆಸ್ ಸದಸ್ಯ ಛತ್ರಧರ್ ಮಹತೊ ಮತ್ತು ಇತರೆ 12 ಮಂದಿಯನ್ನು ಹೆಸರಿಸಿದೆ.</p>.<p class="title">ಮಹತೊ ಅವರು ಮಾವೋವಾದಿ ಬೆಂಬಲಿತ ಪೀಪಲ್ ಎಗೇನ್ಸ್ಟ್ ಪೊಲೀಸ್ ಅಟ್ರಾಸಿಟಿಸ್ (ಪಿಸಿಪಿಎ) ಸಂಘಟನೆಯ ಸಂಚಾಲಕ. ಇವರನ್ನು ಮುಖ್ಯ ಆರೋಪಿಯಾಗಿ, ಅವರ ಸಹೋದರ ಶಶಧರ್ ಮಹತೊ, ಮಾವೋವಾದಿ ಕಮಾಂಡರ್ ದಿವಂಗತ ಕ್ಷೇಂಜಿ ಅವರನ್ನು ಇತರೆ ಆರೋಪಿಗಳಾಗಿ 50 ಪುಟಗಳ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.</p>.<p class="title">ಈ ಎಲ್ಲ ಆರೋಪಿಗಳ ವಿರುದ್ಧಜಾಮೀನುರಹಿತವಾದ, ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕಗಳ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಮೊಕದ್ದಮೆ ದಾಖಲಿಸಲಾಗಿದೆ.</p>.<p>ಆರೋಪಿ ಕ್ಷೇಂಜಿ ನವೆಂಬರ್ 24, 2011ರಲ್ಲಿ ಕೋಬ್ರಾ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದರು. ಬಂಗಾಳ –ಜಾರ್ಖಂಡ್ ಗಡಿಯ ಮಿಡ್ನಾಪುರ್ ಪಶ್ಚಿಮ ಜಿಲ್ಲೆಯ ಅರಣ್ಯಭಾಗದಲ್ಲಿ ಬೃಹತ್ ಕಾರ್ಯಾಚರಣೆ ನಡೆದಿತ್ತು.</p>.<p>ಪತ್ರಕರ್ತನ ಸೋಗು ಧರಿಸಿದ್ದ ಛತ್ರಧರ್ ಮಹತೊರನ್ನು ಸೆಪ್ಟೆಂಬರ್ 2009ರಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ನಂತರ ಸಂತೋಷ್ ಪಾತ್ರಾ ಪಿಸಿಪಿಎ ಸಂಘಟನೆಯ ನಾಯಕತ್ವವನ್ನು ವಹಿಸಿಕೊಂಡಿದ್ದರು, ಪಿಸಿಪಿಎ ಅಕ್ಟೋಬರ್ 27, 2009ರಲ್ಲಿ ದೆಹಲಿ –ಭುವನೇಶ್ವರ ರಾಜಧಾನಿ ಎಕ್ಸ್ಪ್ರೆಸ್ ರೈಲು ಒತ್ತೆಯಾಗಿರಿಸಿಕೊಂಡಿತ್ತು.</p>.<p>ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಹತೊ 11 ವರ್ಷಗಳ ನಂತರ ಫೆಬ್ರುವರಿ 2020ರಲ್ಲಿ ಬಿಡುಗಡೆಯಾಗಿದ್ದರು. ಹಿಂದೆಯೇ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೇ ವರ್ಷ ಮಾರ್ಚ್ 26ರಂದು ಎನ್ಐಎ ಇವರನ್ನು ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>