‘ಉತ್ತರ ಪ್ರದೇಶದ ಗೆಲುವಿಗೆ ಸಾಕಷ್ಟು ಜನರ ಕೊಡುಗೆಯಿದೆ. ಸೂರತ್ನ ನೂರಾರು ಜನರು ಉತ್ತರ ಪ್ರದೇಶಕ್ಕೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಸಾಕಷ್ಟು ಸಂಖ್ಯೆಯ ಉತ್ತರ ಭಾರತೀಯರು ಸೂರತ್ನಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಬೆಂಬಲದಿಂದ ಗೆಲುವು ಸಾಧ್ಯವಾಯಿತು. ಈ ಕಾರಣಕ್ಕೆ ನಮ್ಮನ್ನು ಅಭಿನಂದಿಸಬೇಕು. 35 ವರ್ಷಗಳ ಬಳಿಕ ಪಕ್ಷವೊಂದು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಇತಿಹಾಸ ಸೃಷ್ಟಿಸಿದೆ’ ಎಂದರು.