ಪಕ್ಷದ ಮೂಲ ಚಿಹ್ನೆಗಾಗಿ ಏಕನಾಥ ಶಿಂಧೆ ಬಣ ಬೇಡಿಕೆ ಇಡಲಿದೆ ಎಂಬ ಸುದ್ದಿ ಹರಿದಾಡಿದ್ದವು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದಉದ್ಧವ್,'ಈ ವಿಚಾರದ ಬಗ್ಗೆ ಈಗಾಗಲೇ ಕಾನೂನು ಸಲಹೆ ಪಡೆದುಕೊಂಡಿದ್ದೇನೆ. ಸ್ಪಷ್ಟವಾಗಿ ಹೇಳುತ್ತೇವೆ. ರಾಜಕೀಯ ಪಕ್ಷ ಮತ್ತು ಶಾಸಕಾಂಗ ಪಕ್ಷ, ಇವೆರಡೂ ಬೇರೆಬೇರೆಯೇ. 40 ಶಾಸಕರನ್ನು ಒಬ್ಬ ಶಾಸಕ ಬಿಟ್ಟುಹೋದರೂ, ಪಕ್ಷ ಮತ್ತು ಸಂಘಟನೆ ಉಳಿಯುತ್ತದೆ' ಎಂದಿದ್ದಾರೆ.