<p><strong>ನವದೆಹಲಿ:</strong> ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ವಾದ ಇಂದು (ಏ.24) ಕಾಂಗ್ರೆಸ್ ಪಕ್ಷವು ತನ್ನ ಡಿಜಿಟಲ್ ಮಾಧ್ಯಮ ವೇದಿಕೆಯಾದ ‘ಐಎನ್ಸಿ ಟಿ.ವಿ’ ಚಾನಲ್ ಆರಂಭಿಸಿತು. ಈ ಮೂಲಕ ಪಕ್ಷ ಜನರನ್ನು ನೇರವಾಗಿ ತಲುಪಲು ಉದ್ದೇಶಿಸಿದೆ.</p>.<p class="title">ದೇಶದಲ್ಲಿ ವಿವಿಧ ಸಂಸ್ಥೆಗಳು ಇಂದು ಸರ್ಕಾರದಿಂದ ದಾಳಿಗೆ ಒಳಗಾಗುತ್ತಿವೆ. ಆದರೆ, ಇದು ಮಾಧ್ಯಮಗಳಲ್ಲಿ ಸರಿಯಾಗಿ ಬಿಂಬಿತವಾಗುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.</p>.<p class="title">ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಅವರು, ಸರ್ಕಾರವು ಪ್ರಸಾರ ಮಾಡಲು ಅವಕಾಶ ನೀಡದ ಸುದ್ದಿಗಳು ಐಎನ್ಸಿ ಟಿ.ವಿಯಲ್ಲಿ ಪ್ರಮುಖವಾಗಿ ಸ್ಥಾನ ಪಡೆಯಲಿವೆ. ಈ ಮೂಲಕ ಜನರಿಗೆ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಿದರು.</p>.<p>ವರ್ಚುವಲ್ ಸ್ವರೂಪದಲ್ಲಿ ಚಾನಲ್ಗೆ ಚಾಲನೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಈ ಚಾನಲ್ ಜನರಿಗೆ ಧ್ವನಿಯಾಗಲಿದೆ. ಕಡುಬಡವರ ಸಮಸ್ಯೆಗಳತ್ತ ಗಮನಸೆಳೆಯಲಿದೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್, ಸಂಚಾಲಕ ಪವನ್ ಬನ್ಸಾಲ್, ವಕ್ತಾರ್ ಪವನ್ ಖೇರಾ ಅವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ವಾದ ಇಂದು (ಏ.24) ಕಾಂಗ್ರೆಸ್ ಪಕ್ಷವು ತನ್ನ ಡಿಜಿಟಲ್ ಮಾಧ್ಯಮ ವೇದಿಕೆಯಾದ ‘ಐಎನ್ಸಿ ಟಿ.ವಿ’ ಚಾನಲ್ ಆರಂಭಿಸಿತು. ಈ ಮೂಲಕ ಪಕ್ಷ ಜನರನ್ನು ನೇರವಾಗಿ ತಲುಪಲು ಉದ್ದೇಶಿಸಿದೆ.</p>.<p class="title">ದೇಶದಲ್ಲಿ ವಿವಿಧ ಸಂಸ್ಥೆಗಳು ಇಂದು ಸರ್ಕಾರದಿಂದ ದಾಳಿಗೆ ಒಳಗಾಗುತ್ತಿವೆ. ಆದರೆ, ಇದು ಮಾಧ್ಯಮಗಳಲ್ಲಿ ಸರಿಯಾಗಿ ಬಿಂಬಿತವಾಗುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.</p>.<p class="title">ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಅವರು, ಸರ್ಕಾರವು ಪ್ರಸಾರ ಮಾಡಲು ಅವಕಾಶ ನೀಡದ ಸುದ್ದಿಗಳು ಐಎನ್ಸಿ ಟಿ.ವಿಯಲ್ಲಿ ಪ್ರಮುಖವಾಗಿ ಸ್ಥಾನ ಪಡೆಯಲಿವೆ. ಈ ಮೂಲಕ ಜನರಿಗೆ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಿದರು.</p>.<p>ವರ್ಚುವಲ್ ಸ್ವರೂಪದಲ್ಲಿ ಚಾನಲ್ಗೆ ಚಾಲನೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಈ ಚಾನಲ್ ಜನರಿಗೆ ಧ್ವನಿಯಾಗಲಿದೆ. ಕಡುಬಡವರ ಸಮಸ್ಯೆಗಳತ್ತ ಗಮನಸೆಳೆಯಲಿದೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್, ಸಂಚಾಲಕ ಪವನ್ ಬನ್ಸಾಲ್, ವಕ್ತಾರ್ ಪವನ್ ಖೇರಾ ಅವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>