ವರ್ಚುವಲ್ ಸ್ವರೂಪದಲ್ಲಿ ಚಾನಲ್ಗೆ ಚಾಲನೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಈ ಚಾನಲ್ ಜನರಿಗೆ ಧ್ವನಿಯಾಗಲಿದೆ. ಕಡುಬಡವರ ಸಮಸ್ಯೆಗಳತ್ತ ಗಮನಸೆಳೆಯಲಿದೆ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್, ಸಂಚಾಲಕ ಪವನ್ ಬನ್ಸಾಲ್, ವಕ್ತಾರ್ ಪವನ್ ಖೇರಾ ಅವರು ಇದ್ದರು.