‘ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಬಾತ್ಬಾಗ್–ಹನಿಪೊರ ಗ್ರಾಮದ ನಿವಾಸಿ ರಹ್ ಹುಸೈನ್ ಭಟ್ನನ್ನು ಬಂಧಿಸಲಾಗಿದೆ. ಈತ ಅಲ್–ಬದರ್ ಸಂಘಟನೆಯ ಕಾರ್ಯಕರ್ತ. ಈತ ಈ ಉಗ್ರ ಸಂಘಟನೆಯ ಸದಸ್ಯರಿಗೆ ಕಾರ್ಯಾಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದ. ಈತನಿಗೆ ರಘುನಾಥ್ ಮಂದಿರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಲು ಸೂಚನೆ ನೀಡಲಾಗಿತ್ತು’ ಎಂದು ಜಮ್ಮುವಿನ ಹಿರಿಯಪೊಲೀಸ್ ಅಧಿಕಾರಿ ಮುಖೇಶ್ ಸಿಂಗ್ ಅವರು ತಿಳಿಸಿದರು.