‘ಎಲ್ಒಸಿಯ ಖುಯಿರಟ್ಟಾ ವಲಯದಲ್ಲಿ ಭಾರತೀಯ ಪಡೆಗಳು ಭಾನುವಾರ ನಡೆಸಿದ ವಿವೇಚನೆಯಿಲ್ಲದ ಹಾಗೂ ಅಪ್ರಚೋದಿತ ಗುಂಡಿನ ದಾಳಿಗೆ 11 ನಾಗರಿಕರು ಮೃತಪಟ್ಟಿದ್ದಾರೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ(ಎಫ್ಒ) ತಿಳಿಸಿದೆ. ‘ಪ್ರಸಕ್ತ ವರ್ಷದಲ್ಲಿ ಭಾರತವು 2,820 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಇದರಲ್ಲಿ 26 ನಾಗರಿಕರು ಮೃತಪಟ್ಟಿದ್ದು, 245 ನಾಗರಿಕರು ಗಾಯಗೊಂಡಿದ್ದಾರೆ’ ಎಂದು ಇಲಾಖೆ ಆರೋಪಿಸಿದೆ.