ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಅವಧಿಗೆ ನಡೆಯದ ಸಂಸತ್‌ ಕಲಾಪ: ₹133 ಕೋಟಿ ಸಾರ್ವಜನಿಕ ತೆರಿಗೆ ಹಣ ವ್ಯರ್ಥ 

Last Updated 1 ಆಗಸ್ಟ್ 2021, 5:12 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಸತ್‌ನ ಮುಂಗಾರು ಅಧಿವೇಶನವು ಅತ್ಯಲ್ಪ ಅವಧಿಗೆ ಸೀಮಿತಗೊಂಡಿದೆ. ಹೀಗಾಗಿ ₹133 ಕೋಟಿ ರೂಪಾಯಿ ತೆರಿಗೆದಾರರ ಹಣ ನಷ್ಟವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜುಲೈ 19ರಂದು ಆರಂಭವಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಪೆಗಾಸಸ್‌ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟು ಸಂಸತ್‌ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ಒಟ್ಟು 107 ಗಂಟೆಗಳ ಅಧಿವೇಶನವು ಕೇವಲ 18ಗಂಟೆಗಳಿಗೆ ಸೀಮಿತವಾಗಿದೆ. ಈವರೆಗೆ 89 ಗಂಟೆಗಳ ಅಧಿವೇಶನ ಅವಧಿ ವ್ಯರ್ಥವಾಗಿದೆ. ಆಗಸ್ಟ್‌ 13ರಂದು ಅಧಿವೇಶನ ಅಂತ್ಯಗೊಳ್ಳಲಿದೆ.

ಅಧಿಕೃತ ಮೂಲಗಳು ಹಂಚಿಕೊಂಡ ವಿವರಗಳ ಪ್ರಕಾರ, ರಾಜ್ಯಸಭೆಯು ನಿಗದಿತ ಸಮಯದ ಶೇ. 21ರಷ್ಟು ಕಾರ್ಯನಿರ್ವಹಿಸಿದ್ದರೆ, ಲೋಕಸಭೆಯಲ್ಲಿ ಶೇಕಡಾ 13 ಕ್ಕಿಂತ ಕಡಿಮೆ ಅವಧಿಗೆ ಕಲಾಪ ನಡೆದಿದೆ.

‘ಲೋಕಸಭೆಯು ಒಟ್ಟು 54 ಗಂಟೆಗಳಲ್ಲಿ ಕೇವಲ ಏಳು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಿದೆ. ರಾಜ್ಯಸಭೆಯು 53 ಗಂಟೆಗಳಲ್ಲಿ 11 ಗಂಟೆ ನಡೆದಿದೆ. ನಿರೀಕ್ಷಿತ ಅವಧಿಗೆ ಅಧಿವೇಶನ ನಡೆಯದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ 133 ಕೋಟಿಗೂ ಹೆಚ್ಚು ನಷ್ಟಕ್ಕೆ ಉಂಟಾಗಿದೆ.

ಕಲಾಪ ಸಾಂಗವಾಗಿ ನಡೆಯದೇ ಇರುವುದಕ್ಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ದೂಷಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT