ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲ ಎಂ.ಎಲ್.ಶರ್ಮಾ, ‘ಪೆಗಾಸಸ್ ಗೂಢಚಾರಿಕೆ ಪ್ರಕರಣ, ದೇಶದ ಪ್ರಜಾಪ್ರಭುತ್ವ, ನ್ಯಾಯಾಂಗ ಮತ್ತು ದೇಶದ ಭದ್ರತೆ ಮೇಲೆ ನಡೆದಿರುವ ಗಂಭೀರವಾದ ದಾಳಿ. ಅಷ್ಟೇ ಅಲ್ಲ, ಈ ಬೇಹುಗಾರಿಕೆಯನ್ನು ಉತ್ತರಾದಾಯಿತ್ವ ಇಲ್ಲದೇ ಎಲ್ಲೆಂದರಲ್ಲಿ ಬಳಸಲಾಗುತ್ತಿದೆ. ಇದು ನೈತಿಕತೆಯನ್ನು ವಿರೂಪಗೊಳಿಸುವ‘ ಪ್ರಯತ್ನ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.