ನವದೆಹಲಿ: ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 5ರಂದು ಪ್ರಧಾನಿನರೇಂದ್ರ ಮೋದಿ ಅವರು ‘ಮಣ್ಣು ಉಳಿಸಿ ಅಭಿಯಾನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವರು.
ಮಣ್ಣಿನ ಗುಣಮಟ್ಟ ಕುಸಿಯುತ್ತಿರುವುದು ಹಾಗೂ ಗುಣಮಟ್ಟ ರಕ್ಷಣೆಯ ಮಹತ್ವ ಕುರಿತಂತೆ ಜಾಗೃತಿ ಮೂಡಿಸುವುದು ‘ಮಣ್ಣು ಉಳಿಸಿ ಅಭಿಯಾನ’ದ ಗುರಿಯಾಗಿದೆ ಎಂದುಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಈ ಅಭಿಯಾನವನ್ನು ಇದೇ ವರ್ಷದ ಮಾರ್ಚ್ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಆರಂಭಿಸಿದ್ದರು. ಅಭಿಯಾನದ ಅಂಗವಾಗಿ ಅವರು 27 ರಾಷ್ಟ್ರಗಳಲ್ಲಿ 100 ದಿನ ಬೈಕ್ನಲ್ಲಿ ಜಾಥಾ ತೆರಳಿದ್ದರು.