ಕೋವಿಡ್ನ ಅತಿ ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಎರಡನೇ ಸಭೆಯನ್ನು ಮೋದಿ ಅವರು ಗುರುವಾರ ನಡೆಸಿದರು. ವೈರಾಣುವಿನ ರೂಪಾಂತರದಿಂದಾಗಿ ಯುವ ತಲೆಮಾರಿನಲ್ಲಿ ಕೂಡ ಸೋಂಕು ಹರಡುತ್ತಿರುವುದರ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಯುವ ಜನರಲ್ಲಿನ ಸೋಂಕಿನ ಅಂಕಿಅಂಶಗಳನ್ನು ವಿಶ್ಲೇಷಿಸಬೇಕು. ಆ ಮೂಲಕ ಭವಿಷ್ಯದಲ್ಲಿ ಸೋಂಕನ್ನು ಎದುರಿಸಲು ಸಜ್ಜಾಗಬೇಕು ಎಂದು ಅವರು ಕರೆ ಕೊಟ್ಟರು.