‘ಆ ಪಕ್ಷವು ರೈತರು, ಯುವಕರು, ಸೈನಿಕರು ಹೀಗೆ ಯಾರ ಪರವೂ ಇಲ್ಲ. ಶತ್ರುಗಳ ವಿರುದ್ಧ ಸೆಣಸಿ ಹುತಾತ್ಮರಾದ ಸೈನಿಕರ ಪರಾಕ್ರಮವನ್ನು ಆ ಪಕ್ಷ ಕೊಂಡಾಡಲಿಲ್ಲ. ಬದಲಾಗಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ್ದರ ಕುರಿತ ದಾಖಲೆ ಕೇಳಿತ್ತು. ರಫೇಲ್ ಒಪ್ಪಂದವನ್ನೂ ವಿರೋಧಿಸಿತ್ತು. ಕಾರ್ಮಿಕ ಕಾಯ್ದೆಯು ರೈತರನ್ನು ಸಂಕೋಲೆಯಿಂದ ಬಿಡುಗಡೆ ಮಾಡಲಿದೆ. ತಾವು ಬೆಳೆದ ಬೆಳೆಯನ್ನು ತಮಗೆ ಬೇಕಾದವರಿಗೆ ಬೇಕಾದ ಬೆಲೆಗೆ ಮಾರುವ ಸ್ವಾತಂತ್ರ್ಯವನ್ನು ಒದಗಿಸಲಿದೆ’ ಎಂದು ಟೀಕಿಸಿದ್ದಾರೆ.