<p><strong>ಪಣಜಿ:</strong> ಸಾಮಾಜಿಕ ಹೋರಾಟಗಾರರು ರಚಿಸಿದ್ದ ‘ವಿಲೇಜಸ್ ಆಫ್ ಗೋವಾ’ ವಾಟ್ಸ್ಆ್ಯಪ್ ಗ್ರೂಪ್ಗೆ ಅಶ್ಲೀಲ ವಿಷಯವಿದ್ದ ಸಂದೇಶವೊಂದನ್ನು ಗೋವಾ ಉಪಮುಖ್ಯಮಂತ್ರಿ(ಡಿಸಿಎಂ) ಚಂದ್ರಕಾಂತ್ ಕವಳೇಕರ್ ಅವರು ಕಳುಹಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.</p>.<p>ಘಟನೆ ನಡೆದ ಬೆನ್ನಲ್ಲೇ ಗೋವಾ ಪೊಲೀಸ್ ಸೈಬರ್ ಸೆಲ್ನಲ್ಲಿ ದೂರು ದಾಖಲಿಸಿರುವ ಕವಳೇಕರ್ ತಮ್ಮ ಮೊಬೈಲ್ ಹ್ಯಾಕ್ ಆಗಿರುವುದಾಗಿ ತಿಳಿಸಿದ್ದಾರೆ. ‘ಸೋಮವಾರ ತಡರಾತ್ರಿ 1.20ರ ವೇಳೆಗೆ ಸಂದೇಶ ಕಳುಹಿಸಲಾಗಿದ್ದು, ಆ ಸಂದರ್ಭದಲ್ಲಿ ನಾನು ಮಲಗಿದ್ದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<figcaption><em><strong>ಚಂದ್ರಕಾಂತ್ ಕವಳೇಕರ್</strong></em></figcaption>.<p>‘ವಾಟ್ಸ್ಆ್ಯಪ್ನಲ್ಲಿ ಹಲವು ಗ್ರೂಪ್ಗಳನ್ನು ನಾನು ಸದಸ್ಯನಾಗಿದ್ದೇನೆ. ಆದರೆ ಈ ಗ್ರೂಪ್ಗಷ್ಟೇ ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಸಂದೇಶ ಕಳುಹಿಸಿದ ಸಂದರ್ಭದಲ್ಲಿ ನಾನು ಮೊಬೈಲ್ ಬಳಿಯೇ ಇರಲಿಲ್ಲ. ನಾನು ಮಲಗಿದ್ದೆ. ಕ್ರಿಮಿನಲ್ ಉದ್ದೇಶದಿಂದ ಪಿತೂರಿ ಮಾಡಿ ಈ ಕೃತ್ಯ ನಡೆಸಲಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.</p>.<p>ಉಪಮುಖ್ಯಮಂತ್ರಿಗಳ ನಡತೆಯ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷವಾದ ಗೋವಾ ಫಾರ್ವರ್ಡ್ ಆಗ್ರಹಿಸಿದೆ. ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದ್ದು, ಇದಾದ ನಂತರದಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ:</strong> ಸಾಮಾಜಿಕ ಹೋರಾಟಗಾರರು ರಚಿಸಿದ್ದ ‘ವಿಲೇಜಸ್ ಆಫ್ ಗೋವಾ’ ವಾಟ್ಸ್ಆ್ಯಪ್ ಗ್ರೂಪ್ಗೆ ಅಶ್ಲೀಲ ವಿಷಯವಿದ್ದ ಸಂದೇಶವೊಂದನ್ನು ಗೋವಾ ಉಪಮುಖ್ಯಮಂತ್ರಿ(ಡಿಸಿಎಂ) ಚಂದ್ರಕಾಂತ್ ಕವಳೇಕರ್ ಅವರು ಕಳುಹಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.</p>.<p>ಘಟನೆ ನಡೆದ ಬೆನ್ನಲ್ಲೇ ಗೋವಾ ಪೊಲೀಸ್ ಸೈಬರ್ ಸೆಲ್ನಲ್ಲಿ ದೂರು ದಾಖಲಿಸಿರುವ ಕವಳೇಕರ್ ತಮ್ಮ ಮೊಬೈಲ್ ಹ್ಯಾಕ್ ಆಗಿರುವುದಾಗಿ ತಿಳಿಸಿದ್ದಾರೆ. ‘ಸೋಮವಾರ ತಡರಾತ್ರಿ 1.20ರ ವೇಳೆಗೆ ಸಂದೇಶ ಕಳುಹಿಸಲಾಗಿದ್ದು, ಆ ಸಂದರ್ಭದಲ್ಲಿ ನಾನು ಮಲಗಿದ್ದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>.<figcaption><em><strong>ಚಂದ್ರಕಾಂತ್ ಕವಳೇಕರ್</strong></em></figcaption>.<p>‘ವಾಟ್ಸ್ಆ್ಯಪ್ನಲ್ಲಿ ಹಲವು ಗ್ರೂಪ್ಗಳನ್ನು ನಾನು ಸದಸ್ಯನಾಗಿದ್ದೇನೆ. ಆದರೆ ಈ ಗ್ರೂಪ್ಗಷ್ಟೇ ಅಶ್ಲೀಲ ಸಂದೇಶ ಕಳುಹಿಸಲಾಗಿದೆ. ಸಂದೇಶ ಕಳುಹಿಸಿದ ಸಂದರ್ಭದಲ್ಲಿ ನಾನು ಮೊಬೈಲ್ ಬಳಿಯೇ ಇರಲಿಲ್ಲ. ನಾನು ಮಲಗಿದ್ದೆ. ಕ್ರಿಮಿನಲ್ ಉದ್ದೇಶದಿಂದ ಪಿತೂರಿ ಮಾಡಿ ಈ ಕೃತ್ಯ ನಡೆಸಲಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಉಲ್ಲೇಖಿಸಿದ್ದಾರೆ.</p>.<p>ಉಪಮುಖ್ಯಮಂತ್ರಿಗಳ ನಡತೆಯ ಕುರಿತು ತನಿಖೆ ನಡೆಸಬೇಕು ಎಂದು ವಿಪಕ್ಷವಾದ ಗೋವಾ ಫಾರ್ವರ್ಡ್ ಆಗ್ರಹಿಸಿದೆ. ಪ್ರಾಥಮಿಕ ತನಿಖೆಯನ್ನು ಆರಂಭಿಸಲಾಗಿದ್ದು, ಇದಾದ ನಂತರದಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>