ರಾಷ್ಟ್ರಪತಿ ರಬ್ಬರ್ ಸ್ಟ್ಯಾಂಪ್ ಆಗಬಾರದು. ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗದ ಪಾಲಕನಾಗಿರಬೇಕು. ರಾಷ್ಟ್ರಪತಿ ಅಧಿಕಾರದ ಮುಂದೆ ಸಂಸತ್ತು, ಮಾಧ್ಯಮ, ನ್ಯಾಯಾಂಗ ಮತ್ತು ಸರ್ಕಾರಗಳೆಲ್ಲವೂ ಮಂಡಿಯೂರಬೇಕು. ರಾಷ್ಟ್ರದಲ್ಲಿ ಮತೀಯ ಒಡಕುಗಳು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿಯಾದವರು ಸುಮ್ಮನೆ ಕೂರುತ್ತಾರೆಯೇ? ಎಂದು ಶಿವಸೇನಾ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದೆ.