ದೇಶದಲ್ಲಿ ದ್ವೇಷ ಕೊನೆಗಾಣಿಸಿ ಪ್ರೀತಿ ಹಂಚಬೇಕು ಎಂಬ ಸಂದೇಶ ಹೊತ್ತು ರಾಹುಲ್ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರ ಸಂದೇಶವನ್ನು ಪ್ರತಿ ಮನೆಗೆ ತಲುಪಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ಎಲ್ಲಾ 2.5 ಲಕ್ಷ ಪಂಚಾಯಿತಿಗಳು, 6 ಲಕ್ಷ ಗ್ರಾಮಗಳು ಮತ್ತು 10 ಲಕ್ಷ ಮತಗಟ್ಟೆಗಳಿಗೆ ಕಳಿಸಲಾಗುವುದು ಎಂದು ಜೈರಾಮ್ ರಮೇಶ್ ಅವರು ಭಾರತ್ ಜೋಡೊ ಯಾತ್ರೆ ವೇಳೆ ಹೇಳಿದ್ದಾರೆ.