<p><strong>ಝಲ್ವಾರ(ರಾಜಸ್ಥಾನ): </strong>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭಾರತ್ ಜೋಡೊ ಯಾತ್ರೆ ವೇಳೆ ಇಲ್ಲಿನ ಡಾಬಾವೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಬೆಳಗಿನ ಚಹಾ ಸೇವಿಸಿದರು.</p>.<p><br />89ನೇ ದಿನದ ಯಾತ್ರೆ ಮಧ್ಯಪ್ರದೇಶದಿಂದ ರಾಜಸ್ಥಾನ ತಲುಪಿದ್ದು, ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಪಕ್ಷದ ಮುಖಂಡ ಸಚಿನ್ ಪೈಲೆಟ್ ರಾಹುಲ್ ಗಾಂಧಿಗೆ ಜೊತೆಯಾದರು.</p>.<p><br />ಬೆಳಿಗ್ಗೆ 6.10ಕ್ಕೆ ರಾಜಸ್ಥಾನ–ಮಧ್ಯಪ್ರದೇಶ ಗಡಿ ಝಲ್ರಪಟನಲ್ಲಿ ಯಾತ್ರೆ ಪ್ರಾರಂಭಿಸಿದ ರಾಹುಲ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ರಾಜಸ್ಥಾನದ ಕೆಲ ಸಚಿವರು ಸಾಥ್ ನೀಡಿದರು.</p>.<p><br />ಯಾತ್ರೆ ವೇಳೆ ಕೆಲ ಮಕ್ಕಳ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಬಳಿಕ ಡಾಬಾದಲ್ಲಿ ಅವರೊಂದಿಗೆ ಬೆಳಗಿನ ಚಹಾ ಸೇವಿಸಿದರು. ಯಾತ್ರೆ ವೇಳೆ ಮಾಜಿ ಸಂಸದ ರಘುವೀರ್ ಮೀನ ಆಯಾಸಗೊಂಡಿದ್ದು, ಅವರನ್ನು ಅಂಬ್ಯುಲೆನ್ಸ್ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.</p>.<p><br />‘ಜೋಡೊ ಯಾತ್ರೆ ಯೋಧ ಭೂಮಿ, ಐತಿಹಾಸಿಕ ನಾಡುರಾಜಸ್ಥಾನವನ್ನು ತಲುಪಿದ್ದು, ಯಾತ್ರೆ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸೆ.7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ 2023ರ ಫೆಬ್ರವರಿಯಲ್ಲಿ ಜಮ್ಮು, ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಝಲ್ವಾರ(ರಾಜಸ್ಥಾನ): </strong>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭಾರತ್ ಜೋಡೊ ಯಾತ್ರೆ ವೇಳೆ ಇಲ್ಲಿನ ಡಾಬಾವೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ ಬೆಳಗಿನ ಚಹಾ ಸೇವಿಸಿದರು.</p>.<p><br />89ನೇ ದಿನದ ಯಾತ್ರೆ ಮಧ್ಯಪ್ರದೇಶದಿಂದ ರಾಜಸ್ಥಾನ ತಲುಪಿದ್ದು, ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಪಕ್ಷದ ಮುಖಂಡ ಸಚಿನ್ ಪೈಲೆಟ್ ರಾಹುಲ್ ಗಾಂಧಿಗೆ ಜೊತೆಯಾದರು.</p>.<p><br />ಬೆಳಿಗ್ಗೆ 6.10ಕ್ಕೆ ರಾಜಸ್ಥಾನ–ಮಧ್ಯಪ್ರದೇಶ ಗಡಿ ಝಲ್ರಪಟನಲ್ಲಿ ಯಾತ್ರೆ ಪ್ರಾರಂಭಿಸಿದ ರಾಹುಲ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ರಾಜಸ್ಥಾನದ ಕೆಲ ಸಚಿವರು ಸಾಥ್ ನೀಡಿದರು.</p>.<p><br />ಯಾತ್ರೆ ವೇಳೆ ಕೆಲ ಮಕ್ಕಳ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಬಳಿಕ ಡಾಬಾದಲ್ಲಿ ಅವರೊಂದಿಗೆ ಬೆಳಗಿನ ಚಹಾ ಸೇವಿಸಿದರು. ಯಾತ್ರೆ ವೇಳೆ ಮಾಜಿ ಸಂಸದ ರಘುವೀರ್ ಮೀನ ಆಯಾಸಗೊಂಡಿದ್ದು, ಅವರನ್ನು ಅಂಬ್ಯುಲೆನ್ಸ್ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.</p>.<p><br />‘ಜೋಡೊ ಯಾತ್ರೆ ಯೋಧ ಭೂಮಿ, ಐತಿಹಾಸಿಕ ನಾಡುರಾಜಸ್ಥಾನವನ್ನು ತಲುಪಿದ್ದು, ಯಾತ್ರೆ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸೆ.7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ 2023ರ ಫೆಬ್ರವರಿಯಲ್ಲಿ ಜಮ್ಮು, ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>