<p><strong>ನವದೆಹಲಿ</strong>: ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇದೇ 22ರಂದು ಗುಜರಾತ್ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೆಪ್ಟೆಂಬರ್ 7ರಿಂದ ಆರಂಭವಾಗಿರುವ ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆಯಲ್ಲಿ ಸಕ್ರಿಯವಾಗಿರುವ ರಾಹುಲ್ ಗಾಂಧಿ, ಗುಜರಾತಿನ ಸೌರಾಷ್ಟ್ರಕ್ಕೆ ಪ್ರಯಾಣಿಸಲಿದ್ದಾರೆ. ಕಾಂಗ್ರೆಸ್ ಬಲಿಷ್ಠವಾಗಿರುವ ಸೌರಾಷ್ಟ್ರದಲ್ಲಿ ರಾಹುಲ್ ತಮ್ಮ ಮೊದಲ ಭೇಟಿಯಲ್ಲಿಯೇ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.</p>.<p>ಎರಡನೇ ಹಂತದ ಚುನಾವಣೆಗೂ ಮುನ್ನ ರಾಹುಲ್ ಮತ್ತೊಮ್ಮೆ ಗುಜರಾತಿಗೆ ಭೇಟಿ ನೀಡಲಿದ್ದು, ಆಗಲೂ ಎರಡು ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್ನ ಚುನಾವಣಾ ಪ್ರಚಾರದಲ್ಲಿ ರಾಹುಲ್ ಉಪಸ್ಥಿತಿಯ ಅಗತ್ಯವಿದೆ. ಒಂದು ವೇಳೆ ಅವರು ಗೈರಾದರೆ, ಅದು ತಪ್ಪು ಸಂದೇಶ ರವಾನಿಸುತ್ತದೆ ಎಂಬ ಚರ್ಚೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ನಡೆಯುತ್ತಿತ್ತು.</p>.<p>ವೀಕ್ಷಕರ ನೇಮಕ: ಕರ್ನಾಟಕದವರಾದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಲೋಕಸಭೆಯ ಮಾಜಿ ಸದಸ್ಯ ಕೆ.ಎಚ್. ಮುನಿಯಪ್ಪ ಸೇರಿದಂತೆ ಐವರು ನಾಯಕರನ್ನು ಕಾಂಗ್ರೆಸ್ ಗುಜರಾತ್ನ ಐದು ವಲಯಗಳಿಗೆ ಚುನಾವಣಾ ವೀಕ್ಷಕರನ್ನಾಗಿ ಸೋಮವಾರ ನೇಮಿಸಿದೆ.</p>.<p>ಬಿ.ಕೆ. ಹರಿಪ್ರಸಾದ್ (ಉತ್ತರ), ಮುಕುಲ್ ವಾಸ್ನಿಕ್ (ದಕ್ಷಿಣ), ಮೋಹನ್ ಪ್ರಕಾಶ್ (ಸೌರಾಷ್ಟ್ರ), ಪೃಥ್ವಿರಾಜ್ ಚೌಹಾಣ್ (ಮಧ್ಯ ಗುಜರಾತ್) ಚುನಾವಣಾ ವೀಕ್ಷಕರಾಗಿದ್ದಾರೆ. ಈ ಐವರು ವೀಕ್ಷಕರು, ರಾಜಸ್ಥಾನದ ಮುಖ್ಯಮಂತ್ರಿಯೂ ಆದ ಕೇಂದ್ರ ವೀಕ್ಷಕ ಅಶೋಕ್ ಗೆಹಲೋತ್ ಅವರಿಗೆ ವರದಿ ಮಾಡಿಕೊಳ್ಳುವರು. ಇವರ ಜತೆಗೆ ಕಾಂಗ್ರೆಸ್ 26 ಲೋಕಸಭಾ ಕ್ಷೇತ್ರಗಳಲ್ಲಿ 32 ವೀಕ್ಷಕರನ್ನೂ ನೇಮಿಸಿದೆ.</p>.<p>2024ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರು ಭಾಗವಹಿಸಿದ್ದ ಭಾರತ್ ಜೋಡೊ ಯಾತ್ರೆಯ ಪರಾಮರ್ಶೆ ಸಭೆಯಲ್ಲಿ, ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕುರಿತುಪ್ರಸ್ತಾಪಿಸಲಾಯಿತು.</p>.<p>ಯಾತ್ರೆಯಿಂದ ಇಲ್ಲಿಯವರೆಗೂ ಆಗಿರುವ ಅನುಕೂಲಗಳ ಕುರಿತು ನಾಯಕರು ಸಭೆಯಲ್ಲಿ ಪರಿಶೀಲಿಸಿದರು. ಜತೆಗೆ ಈ ತಿಂಗಳ ಕೊನೆಯಲ್ಲಿ ಯಾತ್ರೆಯು ಉತ್ತರ ಭಾರತ ಪ್ರವೇಶಿಸಲಿದ್ದು, ಅದರ ಸಿದ್ಧತೆಗಳ ಕುರಿತು ಪರಾಮರ್ಶಿಸಿದರು.</p>.<p>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸೇರಿದಂತೆ ಭಾರತ್ ಜೋಡೊ ಯಾತ್ರೆಯ ‘ಟಾಸ್ಕ್ ಫೋರ್ಸ್’ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.</p>.<p>ಸಭೆಯ ಬಳಿಕ ಪ್ರತಿಕ್ರಿಯಿಸಿದ ವೇಣುಗೋಪಾಲ್, ‘ಯಾತ್ರೆಯ ಪರಿಶೀಲನಾ ಸಭೆ ನಡೆಸಿದ್ದೇವೆ. ಯಾತ್ರೆ ಈಗಾಗಲೇ ಅರ್ಧದಷ್ಟು ಕ್ರಮಿಸಿದೆ. ಈಗ ಉತ್ತರ ಭಾರತದ ಹೃದಯವನ್ನು ಪ್ರವೇಶಿಸುತ್ತಿದ್ದೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇದೇ 22ರಂದು ಗುಜರಾತ್ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೆಪ್ಟೆಂಬರ್ 7ರಿಂದ ಆರಂಭವಾಗಿರುವ ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆಯಲ್ಲಿ ಸಕ್ರಿಯವಾಗಿರುವ ರಾಹುಲ್ ಗಾಂಧಿ, ಗುಜರಾತಿನ ಸೌರಾಷ್ಟ್ರಕ್ಕೆ ಪ್ರಯಾಣಿಸಲಿದ್ದಾರೆ. ಕಾಂಗ್ರೆಸ್ ಬಲಿಷ್ಠವಾಗಿರುವ ಸೌರಾಷ್ಟ್ರದಲ್ಲಿ ರಾಹುಲ್ ತಮ್ಮ ಮೊದಲ ಭೇಟಿಯಲ್ಲಿಯೇ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.</p>.<p>ಎರಡನೇ ಹಂತದ ಚುನಾವಣೆಗೂ ಮುನ್ನ ರಾಹುಲ್ ಮತ್ತೊಮ್ಮೆ ಗುಜರಾತಿಗೆ ಭೇಟಿ ನೀಡಲಿದ್ದು, ಆಗಲೂ ಎರಡು ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್ನ ಚುನಾವಣಾ ಪ್ರಚಾರದಲ್ಲಿ ರಾಹುಲ್ ಉಪಸ್ಥಿತಿಯ ಅಗತ್ಯವಿದೆ. ಒಂದು ವೇಳೆ ಅವರು ಗೈರಾದರೆ, ಅದು ತಪ್ಪು ಸಂದೇಶ ರವಾನಿಸುತ್ತದೆ ಎಂಬ ಚರ್ಚೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ನಡೆಯುತ್ತಿತ್ತು.</p>.<p>ವೀಕ್ಷಕರ ನೇಮಕ: ಕರ್ನಾಟಕದವರಾದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಲೋಕಸಭೆಯ ಮಾಜಿ ಸದಸ್ಯ ಕೆ.ಎಚ್. ಮುನಿಯಪ್ಪ ಸೇರಿದಂತೆ ಐವರು ನಾಯಕರನ್ನು ಕಾಂಗ್ರೆಸ್ ಗುಜರಾತ್ನ ಐದು ವಲಯಗಳಿಗೆ ಚುನಾವಣಾ ವೀಕ್ಷಕರನ್ನಾಗಿ ಸೋಮವಾರ ನೇಮಿಸಿದೆ.</p>.<p>ಬಿ.ಕೆ. ಹರಿಪ್ರಸಾದ್ (ಉತ್ತರ), ಮುಕುಲ್ ವಾಸ್ನಿಕ್ (ದಕ್ಷಿಣ), ಮೋಹನ್ ಪ್ರಕಾಶ್ (ಸೌರಾಷ್ಟ್ರ), ಪೃಥ್ವಿರಾಜ್ ಚೌಹಾಣ್ (ಮಧ್ಯ ಗುಜರಾತ್) ಚುನಾವಣಾ ವೀಕ್ಷಕರಾಗಿದ್ದಾರೆ. ಈ ಐವರು ವೀಕ್ಷಕರು, ರಾಜಸ್ಥಾನದ ಮುಖ್ಯಮಂತ್ರಿಯೂ ಆದ ಕೇಂದ್ರ ವೀಕ್ಷಕ ಅಶೋಕ್ ಗೆಹಲೋತ್ ಅವರಿಗೆ ವರದಿ ಮಾಡಿಕೊಳ್ಳುವರು. ಇವರ ಜತೆಗೆ ಕಾಂಗ್ರೆಸ್ 26 ಲೋಕಸಭಾ ಕ್ಷೇತ್ರಗಳಲ್ಲಿ 32 ವೀಕ್ಷಕರನ್ನೂ ನೇಮಿಸಿದೆ.</p>.<p>2024ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರು ಭಾಗವಹಿಸಿದ್ದ ಭಾರತ್ ಜೋಡೊ ಯಾತ್ರೆಯ ಪರಾಮರ್ಶೆ ಸಭೆಯಲ್ಲಿ, ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಕುರಿತುಪ್ರಸ್ತಾಪಿಸಲಾಯಿತು.</p>.<p>ಯಾತ್ರೆಯಿಂದ ಇಲ್ಲಿಯವರೆಗೂ ಆಗಿರುವ ಅನುಕೂಲಗಳ ಕುರಿತು ನಾಯಕರು ಸಭೆಯಲ್ಲಿ ಪರಿಶೀಲಿಸಿದರು. ಜತೆಗೆ ಈ ತಿಂಗಳ ಕೊನೆಯಲ್ಲಿ ಯಾತ್ರೆಯು ಉತ್ತರ ಭಾರತ ಪ್ರವೇಶಿಸಲಿದ್ದು, ಅದರ ಸಿದ್ಧತೆಗಳ ಕುರಿತು ಪರಾಮರ್ಶಿಸಿದರು.</p>.<p>ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸೇರಿದಂತೆ ಭಾರತ್ ಜೋಡೊ ಯಾತ್ರೆಯ ‘ಟಾಸ್ಕ್ ಫೋರ್ಸ್’ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.</p>.<p>ಸಭೆಯ ಬಳಿಕ ಪ್ರತಿಕ್ರಿಯಿಸಿದ ವೇಣುಗೋಪಾಲ್, ‘ಯಾತ್ರೆಯ ಪರಿಶೀಲನಾ ಸಭೆ ನಡೆಸಿದ್ದೇವೆ. ಯಾತ್ರೆ ಈಗಾಗಲೇ ಅರ್ಧದಷ್ಟು ಕ್ರಮಿಸಿದೆ. ಈಗ ಉತ್ತರ ಭಾರತದ ಹೃದಯವನ್ನು ಪ್ರವೇಶಿಸುತ್ತಿದ್ದೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>