ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಕಾಂಗ್ರೆಸ್ ಕಳೆದ 15 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಈ ಸಂದರ್ಭದಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳು ಜನರನ್ನು ಕೊಂದವು. ನಮ್ಮ ಭದ್ರತಾ ಯೋಧರನ್ನು ಕೊಲೆಗೈಯಲಾಯಿತು. ಯಾವುದೇ ತನಿಖೆ ನಡೆಯಲಿಲ್ಲ. ಬುಲೆಟ್, ಗನ್ ಮತ್ತು ಜನರನ್ನು ಕೊಲ್ಲುವುದು ಈ ಹಿಂದಿನ ಸರ್ಕಾರದ ವಿಷಯವಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕರು ಶರಣಾದರು' ಎಂದು ಹೇಳಿದ್ದಾರೆ.