ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲರಿರುವ ರಾಜಭವನಕ್ಕೆ ಜನಸಾಮಾನ್ಯರೂ ಕೂಡ ಭೇಟಿ ನೀಡಬಹುದೆಂದು ನಿರ್ಧರಿಸಲಾಗಿದ್ದು, ಇದೊಂದು ಐತಿಹಾಸಿಕ ಕ್ಷಣವೆಂದು ಇಲ್ಲಿನ ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದರು.
ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜಭವನದ ಬಾಗಿಲಿನ ಕೀಲಿಯನ್ನು ಹಸ್ತಾಂತರಿಸಿದರು. ಬಾಗಿಲು ತೆರೆದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಯಾಗಿ ರಾಷ್ಟ್ರಪತಿ ಅವರು ರಾಜಭವನ ಪ್ರವೇಶಿಸುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
’ರಾಜಭವನವು ವಸಾಹತುಶಾಹಿಗಳ ಪರಿಕಲ್ಪನೆಯಂತೆ ವಿಶೇಷ ಅಧಿಕಾರದ ಸ್ಥಾನವಾಗಿರದೆ, ಇನ್ನು ಮುಂದೆ ಜನಸಾಮಾನ್ಯರ ರಾಜಭವನವಾಗಲಿದೆ’ ಎಂದು ರಾಜ್ಯಪಾಲ ಬೋಸ್ ಹೇಳಿದ್ದಾರೆ.
ರಾಜಭವನಕ್ಕೆ ಸಾರ್ವಜನಿಕರ ಭೇಟಿಯ ಸಮಯವನ್ನು ಇನ್ನೂ ನಿಗದಿಪಡಿಸಿಲ್ಲ.