ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ಮಳೆಗರೆದು ರಾಜಸ್ಥಾನ ಬಿಜೆಪಿ ಸಂಸದೆಯ ಆಪ್ತನ ಭೀಕರ ಹತ್ಯೆ

Last Updated 5 ಸೆಪ್ಟೆಂಬರ್ 2022, 11:11 IST
ಅಕ್ಷರ ಗಾತ್ರ

ಜೈಪುರ: ಗುಂಡಿನ ಮಳೆಗರೆದು ರಾಜಸ್ಥಾನ ಬಿಜೆಪಿ ಸಂಸದೆ ರಂಜಿತಾ ಕೊಲಿ ಅವರ ಆಪ್ತ ಕೃಪಾಲ್ ಸಿಂಗ್ (40) ಎನ್ನುವರನ್ನು ಭಾನುವಾರ ತಡರಾತ್ರಿ ಹತ್ಯೆ ಮಾಡಲಾಗಿದೆ.

ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಕೃಪಾಲ್ ಅವರು ಭಾನುವಾರ 10.45 ಕ್ಕೆ ಸರ್ಕಾರಿ ಪರಿವೀಕ್ಷಣಾ ಮಂದಿರದಿಂದ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಸುಮಾರು 12 ಕ್ಕೂ ಹೆಚ್ಚು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಜಗಿನಾ ಎಂಬಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕೃಪಾಲ್ ಅವರಿಗೆ 7 ಗುಂಡುಗಳು ತಗುಲಿವೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ದುಷ್ಕರ್ಮಿಗಳು ಹಳೆಯ ವೈಷಮ್ಯದಿಂದ ಹತ್ಯೆ ಮಾಡಿರಬಹುದು. ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತಪುರ ಬಿಜೆಪಿ ಸಂಸದೆಯಾಗಿರುವ ರಂಜಿತಾ ಕೊಲಿ ಅವರ ಆಪ್ತರಾಗಿದ್ದ ಕೃಪಾಲ್ ಸಿಂಗ್ ಅವರು ಭರತಪುರ ಜಿಲ್ಲೆಯ ಬಿಜೆಪಿ ನಾಯಕರೂ ಕೂಡ ಆಗಿದ್ದರು.

ಇನ್ನು ತಮ್ಮ ಕ್ಷೇತ್ರದ ಹಳ್ಳಿಯೊಂದಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದ ರಂಜಿತಾ ಅವರ ಮೇಲೆ ಮರಳು ಮಾಫಿಯಾದವರು ಹಲ್ಲೆಗೆ ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT