ಎನ್ಸಿಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಂತ್ರಿ ನವಾಬ್ ಮಲಿಕ್, ಎರಡೂ ಪಕ್ಷಗಳು ಯಾವತ್ತಿಗೂ ಜೊತೆಯಾಗಲು ಸಾಧ್ಯವಿಲ್ಲ. ಪಕ್ಷಗಳ ಸಿದ್ಧಾಂತ ಮತ್ತು ರಾಜಕೀಯ ನಡೆ ಬೇರೆ ಬೇರೆಯಾಗಿರುವುದರಿಂದ ಮೈತ್ರಿ ಸಾಧ್ಯವಿಲ್ಲ ಎಂಬ ಸ್ಪಷ್ಟನೆಗೆ ಅಠಾವಳೆ ಪ್ರತಿಕ್ರಿಯಿಸಿದ್ದಾರೆ. 'ಶಿವಸೇನಾ, ಕಾಂಗ್ರೆಸ್ ಮತ್ತು ಬಿಜೆಪಿ ನದಿಯ ವಿರುದ್ಧ ತೀರದಲ್ಲಿವೆ. ಆದರೆ ಅವುಗಳು ಜೊತೆಯಾಗಿವೆ. ಹಾಗಿರುವಾಗ ಬಿಜೆಪಿ ಮತ್ತು ಎನ್ಸಿಪಿ ಒಂದುಗೂಡಲು ಏಕೆ ಸಾಧ್ಯವಿಲ್ಲ? ಅಂಬೇಡ್ಕರ್ ವಿರುದ್ಧ ದಿಕ್ಕುಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು' ಎಂದು ಅಠಾವಳೆ ತಿಳಿಸಿದ್ದಾರೆ.