ಮುಂಬೈ: ದಿ ಕರಾಡ್ ಜನತಾ ಸಹಕಾರಿ ಬ್ಯಾಂಕ್ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಂಗಳವಾರ ರದ್ದು ಮಾಡಿದೆ. ಬ್ಯಾಂಕ್ ಬಳಿ ಅಗತ್ಯ ಪ್ರಮಾಣದ ಬಂಡವಾಳ ಇಲ್ಲದಿರುವುದು ಆರ್ಬಿಐನ ಈ ಕ್ರಮಕ್ಕೆ ಕಾರಣ.
ಈ ಬ್ಯಾಂಕ್ನಲ್ಲಿ ಹಣ ಠೇವಣಿ ಇರಿಸಿದ್ದ ಶೇಕಡ 99ಕ್ಕಿಂತ ಹೆಚ್ಚಿನವರಿಗೆ ಪೂರ್ಣ ಮೊತ್ತವು ವಾಪಸ್ ಸಿಗಲಿದೆ ಎಂದು ಆರ್ಬಿಐ ಹೇಳಿದೆ. ಪರವಾನಗಿ ರದ್ದಾಗಿರುವ ಕಾರಣ ಈ ಬ್ಯಾಂಕ್ ಇನ್ನು ಮುಂದೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸುವಂತಿಲ್ಲ.
‘ಈ ಬ್ಯಾಂಕ್ ಅಸ್ತಿತ್ವದಲ್ಲಿ ಇರುವುದು ಠೇವಣಿದಾರರ ಹಿತಕ್ಕೆ ಮಾರಕ. ಇದಕ್ಕೆ ಬ್ಯಾಂಕಿಂಗ್ ವಹಿವಾಟು ನಡೆಸಲು ಅವಕಾಶ ಕೊಟ್ಟರೆ ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗುತ್ತದೆ’ ಎಂದು ಆರ್ಬಿಐ ಹೇಳಿದೆ.