ಮಹಾನದಿ, ಬ್ರಹ್ಮಪುತ್ರ ನದಿ ಕಣಿವೆಗಳ ಹೆಚ್ಚುವರಿ ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಗೆ ಹರಿಸಲು ಯೋಜಿಸಲಾಗಿದೆ. ಸಂಬಂಧಿತ ರಾಜ್ಯಗಳ ಸಲಹೆ ಪಡೆದು ಡಿಪಿಆರ್ ಸಿದ್ಧಪಡಿಸಲಾಗಿದೆ. ಇದನ್ನು 2021ರ ಏಪ್ರಿಲ್ನಲ್ಲಿ ಸಂಬಂಧಿತ ರಾಜ್ಯಗಳಿಗೆ ಜಲಶಕ್ತಿ ಸಚಿವಾಲಯ ನೀಡಿದೆ. ಹೆಚ್ಚುವರಿ ನೀರಿನ ಲಭ್ಯತೆ ಬಗ್ಗೆ ಆಯಾ ರಾಜ್ಯಗಳು ತಕರಾರು ಎತ್ತಿವೆ. ಈ ವರ್ಷದ ಏಪ್ರಿಲ್ನಲ್ಲಿ ಜಲ ಅಭಿವೃದ್ಧಿ ಸಂಸ್ಥೆಯು ರಾಜ್ಯಗಳ ಜತೆಗೆ ಸಭೆ ನಡೆಸಿ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು. ಆ ಬಳಿಕ ತಾಂತ್ರಿಕ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಯಿತು. ಅಕ್ಟೋಬರ್ 18ರಂದು ಸಚಿವಾಲಯವು ಸಂಬಂಧಿತ ರಾಜ್ಯಗಳ ಜತೆಗೆ ಸಭೆ ನಡೆಸಿ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿತು.