ಇತ್ತೀಚೆಗೆ ನಿಧನರಾದ ನೂರಕ್ಕೂ ಹೆಚ್ಚು ಗಣ್ಯರಿಗೆ ಸಮಾವೇಶದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಸಮಾಜವಾದಿ ನಾಯಕ ಶರದ್ ಯಾದವ್, ಹಿರಿಯ ವಕೀಲ ಶಾಂತಿ ಭೂಷಣ್, ಬಿಜು ಜನತಾದಳದ ನಾಯಕ ನಬಕಿಶೋರ್ ದಾಸ್, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರಿಗೆ ಗೌರವ ಸಲ್ಲಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ನಿಧನರಾದ ರಾಜಕಾರಣಿಗಳು, ಕಲಾವಿದರು, ಉದ್ಯಮಿಗಳು, ಆರ್ಎಸ್ಎಸ್ ಪದಾಧಿಕಾಗಳು ಹಾಗೂ ಗಣ್ಯರ ಹೆಸರನ್ನು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಭೆಯಲ್ಲಿ ಓದಿದರು.