<p><strong>ಜಮ್ಮು: </strong>ಕಾಶ್ಮೀರಿ ಪಂಡಿತ ಯುವಕರ ನೆರವಿನೊಂದಿಗೆ, ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳನ್ನು ಜೀರ್ಣೋದ್ಧಾರ ಮತ್ತು ನವೀಕರಣಗೊಳಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾಗಿರುವ ಸಂಜೀವಿನಿ ಶಾರದಾ ಕೇಂದ್ರ ಮುಂದಾಗಿದೆ.</p>.<p>‘ನಮ್ಮ ಸಂಜೀವಿನ ಶಾರದಾ ಕೇಂದ್ರದ ಸದಸ್ಯರು, ದೇವಾಲಯ – ಧಾರ್ಮಿಕ ತಾಣಗಳ ಪುನರುಜ್ಜೀವನ ಮತ್ತು ನವೀಕರಣಕ್ಕಾಗಿ ‘ಕಶ್ಯಪ ಭೂಮಿಗಾಗಿ ಯುವಜನ ಸೇವೆ‘ ಎಂಬ ಆಂದೋಲನವನ್ನು ಆರಂಭಿಸಲಿದ್ದಾರೆ‘ ಎಂದು ಕೇಂದ್ರದ ಮುಖ್ಯಸ್ಥ ಕ್ರಿಸೇನ್ ಟಾಕ್ರೂ ತಿಳಿಸಿದ್ದಾರೆ.</p>.<p>‘ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು, ಕ್ಷೇತ್ರಗಳನ್ನು ಪುನರುಜ್ಜೀವನ ಗೊಳಿಸಿ, ಸಂರಕ್ಷಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಗೆ, ಕಾಶ್ಮೀರದಲ್ಲಿ ಧಾರ್ಮಿಕ ಪ್ರವಾಸವನ್ನು ಸುಗಮಗೊಳಿಸುವ ಜೊತೆಗೆ, ಪ್ರವಾಸಿಗರಿಗೆ ಸಂರಕ್ಷಿತ ತಾಣಗಳನ್ನು ಪರಿಚಯಿಸುತ್ತಾ, ಅವರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಿದ್ದಾರೆ‘ ಎಂದು ಟಾಕ್ರೂ ತಿಳಿಸಿದ್ದಾರೆ.</p>.<p>ಈ ಆಂದೋಲನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರ ನೋಂದಣಿ ಪ್ರಕ್ರಿಯೆಯನ್ನೂ ನಮ್ಮ ಕೇಂದ್ರ ಆರಂಭಿಸಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು: </strong>ಕಾಶ್ಮೀರಿ ಪಂಡಿತ ಯುವಕರ ನೆರವಿನೊಂದಿಗೆ, ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳನ್ನು ಜೀರ್ಣೋದ್ಧಾರ ಮತ್ತು ನವೀಕರಣಗೊಳಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಂಗಸಂಸ್ಥೆಯಾಗಿರುವ ಸಂಜೀವಿನಿ ಶಾರದಾ ಕೇಂದ್ರ ಮುಂದಾಗಿದೆ.</p>.<p>‘ನಮ್ಮ ಸಂಜೀವಿನ ಶಾರದಾ ಕೇಂದ್ರದ ಸದಸ್ಯರು, ದೇವಾಲಯ – ಧಾರ್ಮಿಕ ತಾಣಗಳ ಪುನರುಜ್ಜೀವನ ಮತ್ತು ನವೀಕರಣಕ್ಕಾಗಿ ‘ಕಶ್ಯಪ ಭೂಮಿಗಾಗಿ ಯುವಜನ ಸೇವೆ‘ ಎಂಬ ಆಂದೋಲನವನ್ನು ಆರಂಭಿಸಲಿದ್ದಾರೆ‘ ಎಂದು ಕೇಂದ್ರದ ಮುಖ್ಯಸ್ಥ ಕ್ರಿಸೇನ್ ಟಾಕ್ರೂ ತಿಳಿಸಿದ್ದಾರೆ.</p>.<p>‘ಕಾಶ್ಮೀರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ದೇವಾಲಯಗಳು, ಕ್ಷೇತ್ರಗಳನ್ನು ಪುನರುಜ್ಜೀವನ ಗೊಳಿಸಿ, ಸಂರಕ್ಷಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ. ಇದರ ಜೊತೆಗೆ, ಕಾಶ್ಮೀರದಲ್ಲಿ ಧಾರ್ಮಿಕ ಪ್ರವಾಸವನ್ನು ಸುಗಮಗೊಳಿಸುವ ಜೊತೆಗೆ, ಪ್ರವಾಸಿಗರಿಗೆ ಸಂರಕ್ಷಿತ ತಾಣಗಳನ್ನು ಪರಿಚಯಿಸುತ್ತಾ, ಅವರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಿದ್ದಾರೆ‘ ಎಂದು ಟಾಕ್ರೂ ತಿಳಿಸಿದ್ದಾರೆ.</p>.<p>ಈ ಆಂದೋಲನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರ ನೋಂದಣಿ ಪ್ರಕ್ರಿಯೆಯನ್ನೂ ನಮ್ಮ ಕೇಂದ್ರ ಆರಂಭಿಸಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>