<p><strong>ನಾಗಪುರ: ‘</strong>ಸಾಕಷ್ಟು ಹೋರಾಟಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ದೇಶ ಸ್ವಾವಲಂಬಿಯಾಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದರು.</p>.<p>ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯಂದು ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ಧ್ಜಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ದೇಶವು ಜಗತ್ತಿಗೆ ಶಾಂತಿಯ ಸಂದೇಶ ನೀಡುತ್ತದೆ’ ಎಂದು ಹೇಳಿದರು.</p>.<p>‘ಇದು ಹೆಮ್ಮೆ ಪಡುವ ದಿನ. ಸಂಕಲ್ಪ ಹೊಂದುವ ದಿನ. ಸಾಕಷ್ಟು ಹೋರಾಟಗಳ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ಸ್ವಾವಲಂಬಿಯಾಗಬೇಕು’ ಎಂದರು.</p>.<p>‘ದೇಶ ಮತ್ತು ಸಮಾಜ ನಮಗೆ ಏನು ನೀಡಿತು ಎಂದು ಜನ ಕೇಳಬಾರದು. ಬದಲಿಗೆ ದೇಶಕ್ಕೆ ನಾವೇನು ನೀಡುತ್ತಿದ್ದೇವೆ’ ಎಂದು ಯೋಚಿಸಬೇಕು ಎಂದು ಭಾಗವತ್ ಹೇಳಿದರು.</p>.<p>ಬಿಗಿ ಭದ್ರತೆಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ಕೆಲವು ಸ್ವಯಂಸೇವಕರು ಮತ್ತು ಪ್ರಚಾರಕರು ಉಪಸ್ಥಿತರಿದ್ದರು.</p>.<p>ರೇಶಿಂಬಾಗ್ ಪ್ರದೇಶದ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿಯಲ್ಲಿಯೂ ಆರ್ಎಸ್ಎಸ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರಲ್ಲಿ ನಾಗ್ಪುರ ಮಹಾನಗರದ ಸಹಸಂಘಚಾಲಕ್ ಶ್ರೀಧರ್ ಗಾಡ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.</p>.<p>ಸಂಜೆ 5 ಗಂಟೆಗೆ ನಗರದ ವಿವಿಧೆಡೆ ಸ್ವಯಂಸೇವಕರು ‘ಪಥ ಸಂಚಲನ’ ನಡೆಸಲಿದ್ದಾರೆ.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/explainer/explainer-independence-day-the-evolution-of-the-indian-flag-to-the-tricolour-we-know-962926.html" itemprop="url">Explainer| ಭಾರತ ಧ್ವಜದ ಇತಿಹಾಸ: ಈಗಿನ ತಿರಂಗಾದ ವರೆಗಿನ ವಿಕಾಸದ ವಿವರಣೆ </a></p>.<p><a href="https://www.prajavani.net/india-news/as-har-ghar-tiranga-gains-pace-disposal-of-flags-a-matter-of-concern-962963.html" itemprop="url">ತಿರಂಗ ಅಭಿಯಾನಕ್ಕೆ ವೇಗ: ಧ್ವಜದ ಗೌರವಯುತ ವಿಲೇವಾರಿಯೇ ದೊಡ್ಡ ಪ್ರಶ್ನೆ </a></p>.<p><a href="https://www.prajavani.net/karnataka-news/not-insulted-national-flag-minister-nagesh-clarifies-abvp-flag-tipturu-962615.html" itemprop="url">ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ, ಅದು ತಿರುಚಿದ ಫೋಟೊ: ಸಚಿವ ನಾಗೇಶ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ: ‘</strong>ಸಾಕಷ್ಟು ಹೋರಾಟಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ದೇಶ ಸ್ವಾವಲಂಬಿಯಾಗಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದರು.</p>.<p>ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯಂದು ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿ ಧ್ಜಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ದೇಶವು ಜಗತ್ತಿಗೆ ಶಾಂತಿಯ ಸಂದೇಶ ನೀಡುತ್ತದೆ’ ಎಂದು ಹೇಳಿದರು.</p>.<p>‘ಇದು ಹೆಮ್ಮೆ ಪಡುವ ದಿನ. ಸಂಕಲ್ಪ ಹೊಂದುವ ದಿನ. ಸಾಕಷ್ಟು ಹೋರಾಟಗಳ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಾವು ಸ್ವಾವಲಂಬಿಯಾಗಬೇಕು’ ಎಂದರು.</p>.<p>‘ದೇಶ ಮತ್ತು ಸಮಾಜ ನಮಗೆ ಏನು ನೀಡಿತು ಎಂದು ಜನ ಕೇಳಬಾರದು. ಬದಲಿಗೆ ದೇಶಕ್ಕೆ ನಾವೇನು ನೀಡುತ್ತಿದ್ದೇವೆ’ ಎಂದು ಯೋಚಿಸಬೇಕು ಎಂದು ಭಾಗವತ್ ಹೇಳಿದರು.</p>.<p>ಬಿಗಿ ಭದ್ರತೆಯ ನಡುವೆ ನಡೆದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ಕೆಲವು ಸ್ವಯಂಸೇವಕರು ಮತ್ತು ಪ್ರಚಾರಕರು ಉಪಸ್ಥಿತರಿದ್ದರು.</p>.<p>ರೇಶಿಂಬಾಗ್ ಪ್ರದೇಶದ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿಯಲ್ಲಿಯೂ ಆರ್ಎಸ್ಎಸ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರಲ್ಲಿ ನಾಗ್ಪುರ ಮಹಾನಗರದ ಸಹಸಂಘಚಾಲಕ್ ಶ್ರೀಧರ್ ಗಾಡ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.</p>.<p>ಸಂಜೆ 5 ಗಂಟೆಗೆ ನಗರದ ವಿವಿಧೆಡೆ ಸ್ವಯಂಸೇವಕರು ‘ಪಥ ಸಂಚಲನ’ ನಡೆಸಲಿದ್ದಾರೆ.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/explainer/explainer-independence-day-the-evolution-of-the-indian-flag-to-the-tricolour-we-know-962926.html" itemprop="url">Explainer| ಭಾರತ ಧ್ವಜದ ಇತಿಹಾಸ: ಈಗಿನ ತಿರಂಗಾದ ವರೆಗಿನ ವಿಕಾಸದ ವಿವರಣೆ </a></p>.<p><a href="https://www.prajavani.net/india-news/as-har-ghar-tiranga-gains-pace-disposal-of-flags-a-matter-of-concern-962963.html" itemprop="url">ತಿರಂಗ ಅಭಿಯಾನಕ್ಕೆ ವೇಗ: ಧ್ವಜದ ಗೌರವಯುತ ವಿಲೇವಾರಿಯೇ ದೊಡ್ಡ ಪ್ರಶ್ನೆ </a></p>.<p><a href="https://www.prajavani.net/karnataka-news/not-insulted-national-flag-minister-nagesh-clarifies-abvp-flag-tipturu-962615.html" itemprop="url">ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ, ಅದು ತಿರುಚಿದ ಫೋಟೊ: ಸಚಿವ ನಾಗೇಶ್ ಸ್ಪಷ್ಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>