‘ದೀರ್ಘಕಾಲ ಪ್ರತಿಭಟನೆಯನ್ನು ಮುಂದುವರಿಸಲು ಸಲ್ಮಾನ್ ಖುರ್ಷಿದ್, ರಾಹುಲ್ ರಾಯ್ (ಸಿನಿಮಾ ನಿರ್ಮಾಪಕ), ಭೀಮ್ ಆರ್ಮಿ ಸದಸ್ಯರಾದ ಹಿಮಾಂಶು, ಚಂದನ್ಕುಮಾರ್ ಅವರಂಥ ಕೆಲವು ವ್ಯಕ್ತಿಗಳು ನನಗೆ ಮತ್ತು ಖಾಲಿದ್ ಸೈಫಿಗೆ ಸೂಚಿಸಿದ್ದರು. ಅವರು ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು’ ಎಂದು ಇಶ್ರತ್ ಜಹಾನ್ ಹೇಳಿಕೆ ನೀಡಿದ್ದಾರೆ. ಇವರ ಎಲ್ಲ ಹೇಳಿಕೆಗಳನ್ನೂ ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.